ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ : ಬಿಜೆಪಿ ಕಚೇರಿಯಲ್ಲಿ ಸೇವಾ ಕಾರ್ಯಗಳೊಂದಿಗೆ ಆಚರಣೆ

ವಿಶ್ವ ಶೇಷ್ಟ ಭಾರತ ನಿರ್ಮಾಣ ಮಾಡಿದ ಪ್ರಧಾನಿ ಮೋದಿ : ನಾರಾಯಣ ಪ್ರಸಾದ್
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು 73 ವರ್ಷದ ಹುಟ್ಟುಹಬ್ಬವನ್ನು ಜಿಲ್ಲಾ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದೊಂದಿಗೆ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ನಗರದ ನೂತನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸೇವಾ ಕಾರ್ಯಕ್ರಮದಲ್ಲಿ ರಕ್ತದಾನ, ನೇತ್ರಾ ದಾನ ಹಾಗೂ ದೇಹ ದಾನವನ್ನು ಆಯೋಜನೆ ಮಾಡಲಾಗಿತ್ತು. 20 ಮಂದಿ ರಕ್ತದಾನ ಮಾಡಿದರು. 46 ಮಂದಿ ನೇತ್ರದಾನ ಹಾಗೂ ಇಬ್ಬರು ದೇಹ ದಾನ ಮಾಡಲು ನೋಂದಾಯಿಸಿಕೊಳ್ಳುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಗಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಜಿ. ನಾರಾಯಣ ಪ್ರಸಾದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷಗಳು ಪ್ರಧಾನಿಯಾಗಿ ಉತ್ತಮ ಆಡಳಿತ ನೀಡುವ ಜೊತೆಗೆ ವಿಶ್ವ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರು ದೂರದೃಷ್ಟಿತ್ವ ಆಡಳಿತ, ಭ್ರಷ್ಟಾಚಾರ ರಹಿತ ಆಡಳಿತದಿಂದ ಇಂದು ದೆಹಲಿಯಲ್ಲಿ ಘೋಷಣೆಯಾದ ಯೋಜನೆಯ ಅನುದಾನ ಒಂದು ಪೈಸೆ ಕಡಿಮೆ ಇಲ್ಲದಂತೆ ಫಲಾನುಭವಿಗಳ ಖಾತೆಗೆ ತಲುಪುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ಆಡಳೀತ ವೈಖರಿ. ಹಗಲು ರಾತ್ರಿ ಎನ್ನದೇ ದೇಶದ ಅಭಿವೃದ್ದಿಗೆ ತಮ್ಮನ್ನೇ ಸಮರ್ಪಣೆ ಮಾಡಿಕೊಂಡಿರುವ ಮೋದಿ ಅವರು ವಿಶ್ವ ನಾಯಕರು. ಅವರ ಮತ್ತೊಮ್ಮೆ ಪ್ರಧಾನಿಯಾಗಬೇಕು. ದೇಶದ ಎಲ್ಲಾ ರಾಷ್ಟ್ರಗಳು ಸಹ ಇದನ್ನೇ ಜಪಿಸುತ್ತಿದ್ದೇವೆ. ಭಾರತೀಯರಾದ ನಾವೆಲ್ಲರು ಸಹ ಪ್ರಧಾನಿ ನರೇಂದ್ರ ಅವರ ಆಡಳಿತಕ್ಕೆ ಜಯ ಎನ್ನಬೇಕಾಗಿದೆ. ಅವರ ಸೇವಾ ಯಜ್ಞ ಮುಂದುವರಿಯಲಿ ಎಂದು ಆಶಿಸಿಸೋಣ ಎಂದರು.

ಸೇವಾ ಅಭಿಯಾನದ ಪ್ರಮುಖ ಡಾ. ಎ.ಆರ್. ಬಾಬು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸುಭದ್ರವಾದ ಆಡಳಿತ ನೀಡುವ ಜೊತೆಗೆ ಎಲ್ಲಾ ವರ್ಗದಜನರಿಗೂ ತಲುಪುವಂತಹ ಯೋಜನೆಗಳನ್ನು ಜಾರಿ ಮಾಡಿದರು. ಅವರ ಹುಟ್ಟುಹಬ್ಬನ್ನು ಸೇವಾ ಕಾರ್ಯಗಳ ಮೂಲಕ ಚಾಲನೆ ನೀಡುವ ಜೊತೆಗೆ ಅ. 2 ರವರೆಗೆ ಜಿಲ್ಲಾಧ್ಯಂತ ವಿವಿಧ ಮಂಡಲ, ಮೋರ್ಚಾಗಳು ಹಾಗೂ ಶಕ್ತಿ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಗರದ ಬಿಜೆಪಿ ಹಿರಿಯ ಕಾರ್ಯಕರ್ತರ ಕೇಬಲ್ ಮುದ್ದಪ್ಪ ಮತ್ತು ಪತ್ನಿ ಲೀಲಾವತಿ ಮುದ್ದಪ್ಪ ಅವರು ನೇತ್ರದಾನಕ್ಕೆ ನೊಂದಣಿ ಮಾಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಎಂ. ರಾಮಚಂದ್ರು, ನಿಜಗುಣರಾಜು, ಜಿಲ್ಲಾ ಉಪಾಧ್ಯಕ್ಷ ಪಿ. ವೃಷಬೇಂದ್ರಪ್ಪ, ನೂರೊಂದುಶೆಟ್ಟಿ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಕಿಲಗೆರೆ ಬಸವರಾಜು, ನೂರೊಂದುಶೆಟ್ಟಿ, ಎಸ್. ಬಾಲಸುಬ್ರಮಣ್ಯ, ನಗರಸಭಾ ಸದಸ್ಯರಾದ ಕುಮುದಾ, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಬಸವಣ್ಣ, ಯುವ ಬಿಜೆಪಿಘಟಕದ ಸೂರ್ಯ ಬಾಲರಾಜು, ವಿರಾಟ್ ಶಿವು, ಆನಂದ್ ಭಗೀರಥ್, ಅನಂದ್, ಮಾಜಿ ಅಧ್ಯಕ್ಷ ಮಹದೇವನಾಯಕ,ಉಪೇಂದ್ರ, ಕೂಸಣ್ಣ, ಪರಶಿವ, ವನಾಜಾಕ್ಷಿ, ದಾಕ್ಷಾಯಿನಿ, ನಂದೀಶ್ ಮೊದಾಲದವರು ಇದ್ದರು.

Leave a Reply

Your email address will not be published. Required fields are marked *