ಬಯಲ ಬೆಳಗಾದ ಡಾ.ಎಚ್‌ ತಿಪ್ಪೇರುದ್ರಸ್ವಾಮಿ ಅವರನ್ನು ಕಾಣಲವಕಾಶ ; ಅವರ ಸಾಹಿತ್ಯಾವಲೋಕನ

ಚಿದ್ರೂಪ ಅಂತಃಕರಣ
ನಾನು ಕನ್ನಡ ಸ್ನಾತಕೋತ್ತರ ಎಂ.ಎ ವಿದ್ಯಾರ್ಥಿಯಾಗಿದ್ದಾಗ ಡಾ.ಎಚ್‌ತಿಪ್ಪೇರುದ್ರಸ್ವಾಮಿ ಅವರಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಶೂನ್ಯ ಸಂಪಾದನೆ, ಕದಳಿಯ ಕರ್ಪೂರ, ತೌಲನಿಕ ಕಾವ್ಯ ಮೀಮಾಂಸೆ ಮೊದಲಾದ ಕೃತಿಗಳನ್ನು ಪಠ್ಯವಿಷಯ ನಿಯೋಜಿತ ಕಾರ್ಯಗಳ ನಿಟ್ಟಿನಲ್ಲಿ ಕಣ್ಣಾಡಿಸಿದ್ದು ಮಾತ್ರ ಬಿಟ್ಟರೆಅವರ ಬಗ್ಗೆ ಖುದ್ದಾಗಿ ಹೆಚ್ಚೇನು ತಿಳಿದುಕೊಳ್ಳದ ದೌರ್ಭಾಗ್ಯನಾಗಿದ್ದೆ.

ಆದರೆ ಮಾತೃ ಸ್ವರೂಪಿಣಿ ಶ್ರೀಮತಿ ಕಮಲಮ್ಮ ಅವರ ದೆಸೆಯಿಂದ ಡಾ.ಎಚ್‌ತಿಪ್ಪೇರುದ್ರಸ್ವಾಮಿ ಅವರ ಹಿರಿಯ ಪುತ್ರಿ ಡಾ.ಎಚ್.ಟಿ ಶೈಲಜ ಅವರ ಪರಿಚಯವಾಗಿ ಬಯಲ ಬೆಳಗು ಮತ್ತು ಸಾಹಿತ್ಯಾವಲೋಕನ ಡಾ. ಎಚ್.ತಿಪ್ಪೇರುದ್ರಸ್ವಾಮಿ ೮೫ ಮತ್ತು ೯೫ರ ನೆನಪಿನ ಸಂಪುಟ ಎಂಬ ಎರಡು ಪುಸ್ತಕಗಳು ನನ್ನಕೈಸೇರಿದವು. ಈ ಮೂಲಕ ನನಗೆ ತಿಪ್ಪೇರುದ್ರಸ್ವಾಮಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಭಾಗ್ಯದ ಬಾಗಿಲು ತೆರೆಯಿತು.

ಮಾನವ ವಿಕಾಸದಲ್ಲಿ ಸಾಹಿತ್ಯ ಕ್ಷೇತ್ರವು ಆಧ್ಯಾತ್ಮಿಕ, ಧಾರ್ಮಿಕ, ಕಲೆ ಮತ್ತು ಇತರೆ ಕ್ಷೇತ್ರಗಳ ರೀತಿಯಲ್ಲಿ ಪ್ರಾಮುಖ್ಯತೆ ಹೊಂದಿದೆ. ಈ ವಿಚಾರವಾಗಿ ಎಚ್.ತಿಪ್ಪೇರುದ್ರಸ್ವಾಮಿ ಅವರು ಕೈಗೊಂಡ ಸಾಹಿತ್ಯ ಕ್ಷೇತ್ರದ ಮಹತ್ಕಾರ್ಯ, ಭವಿಷ್ಯದ ದೇಶದ ಅಭ್ಯುದಯವೇ ಸರಿ. ಅದರಲ್ಲೂ ವಚನ ಕಾಲದ ಹೆಗಲಾಗಿ ಸಕಾಲ ಮತ್ತು ಸರ್ವಕಾಲದಲ್ಲೂ ನಿಲ್ಲುವ ಧೀಮಂತ ಸಾಹಿತ್ಯ ಸರಳ ಕಾಯಕ ಜೀವಿಯಾಗಿ ಕನ್ನಡ ನಾಡಿಗೆ ತಿಪ್ಪೆರುದ್ರಸ್ವಾಮಿ ಅವರು ದೊರಕಿರುವುದು ನಾಡಿನ ಹೆಮ್ಮೆ. ಇವರ ಶ್ರಮದ ನೆರಳಲ್ಲಿ ಸಂಸ್ಕೃತಿ ಮತ್ತು ಸಮುದಾಯವು ಪೋಷಿಸಿಕೊಳ್ಳುವ ಬಗೆಯಲ್ಲಿ ನಾವೆಲ್ಲರೂ ಫಲಾನುಭವಿಗಳು.

ಸಂಸ್ಕೃತಿ ವೈದ್ಯರಾದ ತಿಪ್ಪೇರುದ್ರಸ್ವಾಮಿ ಅವರಿಗೆ ನಮ್ಮಿಂದಾಗಬಹುದಾದ ಕೃತಜ್ಞತೆ ಎಂದರೆ ಅವರು ರಚಿಸಿದ, ಸಂಶೋಧಿಸಿದ ಸಾಹಿತ್ಯದ ಮಟ್ಟನ್ನು ಅನ್ವಯಿಕ ನಡೆಯಲ್ಲಿ ಪೀಳಿಗೆಗೆ ವರ್ಗಾಯಿಸುವುದಾಗಿದೆ.ಜತೆಗೆ ಮುಂದುವರೆದುಅವರ ಸಾಹಿತ್ಯದ ಹೆದ್ದಾರಿಗಳಲ್ಲಿ ಕವಲೊಡೆದುಒಂದೇ ಮರದ ಕೊಂಬೆಗಳ ಹಸಿರೆಲೆ ಹೂಗಳಾಗಿ – ಕಾಯಿ ಹಣ್ಣುಗಳಾಗಿ ಬೆಳೆದು ಪರೋಪಕಾರಿಯಾಗುವುದಾಗಿದೆ.

ಬಯಲ ಬೆಳಗು ಮತ್ತು ಸಾಹಿತ್ಯಾವಲೋಕನ ಪುಸ್ತಕಗಳು ಸಿದ್ಧಗಂಗಾ ಶ್ರೀಕ್ಷೇತ್ರದ ಪರಮಪೂಜ್ಯ ನಿರಂಜನ ಪ್ರಣವ ಸ್ವರೂಪಿ ಡಾ. ಶ್ರೀ ಶ್ರೀಶ್ರೀ ಶಿವಕುಮಾರ ಮಹಾ ಸ್ವಾಮಿಗಳು, ಸುತ್ತೂರು ಶ್ರೀಕ್ಷೇತ್ರದ ಪರಮ ಪೂಜ್ಯಜಗದ್ಗುರು ಶ್ರೀ ಶ್ರೀಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಹಿರೇಕಲ್ಮಠ, ಹೊನ್ನಾಳಿ ಶ್ರೀಕ್ಷೇತ್ರದ ಪರಮಪೂಜ್ಯ ಷಟ್ ಸ್ಥಲಬ್ರಹ್ಮ ಶ್ರೀ ಶ್ರೀಶ್ರೀಒಡೆಯರ್‌ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಅವರುಗಳ ಮಹಾಪೋಷಣೆ ಮತ್ತು ಆಶೀರ್ವಾದದೊಂದಿಗೆ ಇದೇ ತಿಂಗಳ ೨೨ನೆಯ ತಾರೀಖಿನಂದು ಲೋಕಾರ್ಪಣೆಗೊಳ್ಳುತ್ತಿವೆ. ಈ ಅಭಿನಂದನಾ ಕೃತಿಗಳ ಸಂಪಾದಿತ ಗೌರವಾಧ್ಯಕ್ಷರಾಗಿ ಡಾ. ಎಂ.ಚಿದಾನಂದಮೂರ್ತಿಯವರು, ಸಂಪಾದಕರಾಗಿ ಮತ್ತು ಸಂಚಾಲಕರಾಗಿಡಾ. ಎಚ್.ಟಿ ಶೈಲಜ, ಪ್ರೊ. ಮಲೆಯೂರುಗುರುಸ್ವಾಮಿ, ಡಾ. ಬಿ. ನಂಜುಂಡಸ್ವಾಮಿ, ಡಾ. ಬಿ. ಪ್ರಭುಸ್ವಾಮಿಕಟ್ನವಾಡಿ, ಡಾ. ಬಿ. ಎಸ್ ಸುದೀಪ್ ಅವರುಗಳು ಜವಾಬ್ದಾರಿ ಹೊತ್ತಿದ್ದಾರೆ.

ಗೌರವಾನ್ವಿತ ಸದಸ್ಯರಾಗಿಡಾ.ಎನ್. ಬಸವಾರಾಧ್ಯ, ಪ್ರೊ. ಜಿ. ಎಸ್ ಸಿದ್ಧಲಿಂಗಯ್ಯ, ಡಾ. ಎಂ.ಎಂ ಕಲಬುರ್ಗಿ, ಶ್ರೀ ಗೊ.ರು.ಚನ್ನಬಸಪ್ಪ, ಡಾ ಸಾ. ಶಿ ಮರುಳಯ್ಯ, ಪ. ಮಲ್ಲೇಶ್ ಹೀಗೆ ಮತ್ತಲವರು ಈ ಪುಸ್ತಕಗಳ ಸದಸ್ಯಸ್ಥಾನದಲ್ಲಿದ್ದಾರೆ.

ಈ ಅಭಿನಂದನಾ ಪುಸ್ತಕಗಳ ತಯಾರಿಗೆ ೨೦೧೨ರಲ್ಲೇ ಯೋಜಿಸಲಾಗಿಅವರ ಗುರುಬಳಗ, ಸಹೋದ್ಯೋಗಿ ಬಳಗ, ಶಿಷ್ಯಬಳಗ, ಅಭಿಮಾನಿ ಬಳಗ ಅಧಿಕವಾಗಿದ್ದುಎಲ್ಲಾಕಡೆಯಿಂದಲೂ ಸಾಹಿತ್ಯಿಕ ಮಾಹಿತಿಯನ್ನು ಕಲೆಹಾಕಿ ಒಂದುರೂಪಕ್ಕೆತರಲುಒಂದುದಶಕವೇ ಹಿಡಿದು ಈ ಪ್ರಸಕ್ತ ವರ್ಷವಾದ ೨೦೨೩ರಲ್ಲಿ ಹೊರತರಲಾಗುತ್ತಿದೆ. ವಿಷಾದವೆಂದರೆ ಈ ಪುಸ್ತಕಗಳ ಆರಂಭದರೂಪುರೇಷೆಯಲ್ಲಿ ಕೈ ಜೋಡಿಸಿದ ಕೆಲ ವಿದ್ವಾಂಸ ಮಹನೀಯರು, ಲೇಖಕರು, ಹಿರಿಯರುದೈವಾಧೀನರಾಗಿದ್ದಾರೆ.

ಬಯಲ ಬೆಳಗು ಗ್ರಂಥವು ಮೂರು ಭಾಗಗಳನ್ನು ಒಳಗೊಂಡಿದ್ದು; ಭಾಗಒಂದರಲ್ಲಿ (೫೨) ಪೂಜ್ಯರ ಆಶೀರ್ವಚನವಿದೆ. ಭಾಗಎರಡರಲ್ಲಿ (೩೭೫) ಗುರು ಹಿರಿಯರು, ವಿದ್ವಾಂಸರು, ಸಹೋದ್ಯೋಗಿಗಳು, ಶಿಷ್ಯರು, ಅಭಿಮಾನಿಗಳು ತಿಪ್ಪೇರುದ್ರಸ್ವಾಮಿಅವರನ್ನು ಈ ಬಗೆಯಾಗಿ; ಸಾಹಿತಿಗಳ ಮೊದಲ ಶ್ರೇಣಿಯವರು- ಮುಖ್ಯಮಂತ್ರಿಎಸ್ ನಿಜಲಿಂಗಪ್ಪ, ನನ್ನಚಿದ್ವಲಯದವರು – ಕುವೆಂಪು, ಅಗ್ರ ಶಿಷ್ಯ – ಪ್ರೊ.ಸ. ಸ ಮಾಳವಾಡ, ಕನ್ನಡದಕಟ್ಟಾ ಅಭಿಮಾನಿಗಳು – ಗೊರೂರುರಾಮಸ್ವಾಮಿಅಯ್ಯಂಗಾರ್, ಒಂದುಅಪೂರ್ವಚೇತನ – ಪ್ರೊಎಸ್. ವಿ ಪರಮೇಶ್ವರಭಟ್ಟ, ಶತಾಯುರ್ಭವ – ರಂಗನಾಥ ದಿವಾಕರ, ಕನ್ನಡ ಸಾಹಿತ್ಯದ ಶಿವಯೋಗಿಗಳು – ಎಸ್ ಎಂ. ವೀರಭದ್ರಯ್ಯ ಬಸವಸುತ, ಅನುಭಾವದಅರಸ – ಪೂಜ್ಯ ಶ್ರೀ ಮಹಾಂತೇಶಶಾಸ್ತ್ರಿಗಳು, ಶರಣ ಸಾಹಿತ್ಯದ ಪ್ರವರ್ಧಕರು – ಮಾರ್ಕಂಡಪುರಂ ಶ್ರೀನಿವಾಸ, ಶೂನ್ಯದಲ್ಲಿ ಪೂರ್ಣವನ್ನುತುಂಬುತ್ತಿದ್ದವರು – ಡಾ.ಕೆ ಚಿದಾನಂದಗೌಡ ಮತ್ತಿತ್ತಾಗಿ ಬರೆದಿರುವಅನೇಕರ ಬರೆವಣಿಗೆಗಳನ್ನು ಕಲೆಹಾಕಲಾಗಿದೆ. ಭಾಗ ಮೂರರಲ್ಲಿ ನೆನಪಿನ ಬುತ್ತಿ – ಡಾ. ಎಚ್‌ತಿಪ್ಪೇರುದ್ರಸ್ವಾಮಿ, ಬದುಕಿನ ಹೆಜ್ಜೆಗಳು, ಡಾ.ಎಚ್‌ತಿಪ್ಪೇರುದ್ರಸ್ವಾಮಿಅವರ ಸಮಗ್ರ ಸಾಹಿತ್ಯ ಸಂಪುಟಯೋಜನೆಎಂಬುದರಜತೆಗೆಇನ್ನೂ ನಾಲ್ಕು ಅನುಬಂಧ ವಿಷಯಗಳನ್ನು ಸೇರಿಸಲಾಗಿದೆ.

ಸಾಹಿತ್ಯಾವಲೋಕನಗ್ರಂಥವು ಮೂರು ಭಾಗಗಳನ್ನು ಒಳಗೊಂಡಿದ್ದು,; ಭಾಗಒಂದರಲ್ಲಿತಿಪ್ಪೇರುದ್ರಸ್ವಾಮಿಅವರ ವ್ಯಕ್ತಿತ್ವಕುರಿತಾಗಿ ಬಂಧುಗಳು ಕಂಡಂತೆ, ಕವಿಗಳು ಕಂಡಂತೆಎಂಬುದಾಗಿತಿಪ್ಪೇರುದ್ರಸ್ವಾಮಿಅವರೊಂದಿಗಿನ ಬಂಧುಗಳ, ಕವಿಮಿತ್ರರಒಡನಾಟದ ಲೇಖನಗಳು ಈ ಬಗೆಯಾಗಿ ಬಂದಿವೆ. ನೆನಪಿನ ಗಣಿಯಲ್ಲಿ ನನ್ನ ಪತಿ – ಶ್ರೀಮತಿ ಗೌರಮ್ಮಡಾ. ಎಚ್‌ತಿಪ್ಪೇರುದ್ರಸ್ವಾಮಿ, ನನ್ನಅಣ್ಣ – ಎಚ್.ಎಂ ಅನ್ನಪೂರ್ಣ, ಅಜ್ಜನ ನೆನಪುಗಳು – ಬಿ.ಎಸ್‌ಅರುಣ್, ಜೀವ ಭಾವದೇವಕಣ – ಚೆನ್ನವೀರಕಣವಿ, ರಸರುದ್ರಚಿದ್ರೂಪ – ಪ್ರೊ.ಕಿರಣ್‌ರವೀಂದ್ರದೇಸಾಯಿ ಮತ್ತಿತರರವು.

ಭಾಗ ಎರಡರಲ್ಲಿ ಸಾಹಿತ್ಯಾವಲೋಕನ ಶೀರ್ಷಿಕೆಯಡಿಯಲ್ಲಿ ತಿಪ್ಪೇರುದ್ರಸ್ವಾಮಿಅವರಕಾದಂಬರಿ, ಕವನ, ಕಥೆ, ನಾಟಕ, ಮಕ್ಕಳ ಸಾಹಿತ್ಯ, ವಚನ, ಬಾನುಲಿ ಚಿಂತನ, ಜೀವನಚರಿತ್ರೆ, ಸಂಶೋಧನೆ, ಸಂಸ್ಕೃತಿ, ಮೀಮಾಂಸೆ, ವ್ಯಾಖ್ಯಾನ, ಅನುವಾದ, ವಿಮರ್ಶೆ, ಸಂಪಾದಿತ, ಪ್ರಧಾನ ಸಂಪಾದಕತ್ವ, ಇಂಗ್ಲಿಷ್ ಕೃತಿಗಳು, ಸಂಕೀರ್ಣವೆಂಬ ಪ್ರಕಾರಗಳ ಕೃತಿಗಳನ್ನು; ಪರಿಪೂರ್ಣದೆಡೆಗೆಒಂದು ಅವಲೋಕನ – ದೊಡ್ಡ ಬಸಪ್ಪ ಬಳೂರಗಿ, ತಪೋರಂಗಒಂದು ವಿವೇಚನೆ – ಡಾ. ಸುಶೀಲಾ ನೆಲ್ಲಿಸರ, ಗುಟ್ಟಿನಗಂಟು – ಡಾ.ಎನ್ ಮಹೇಶ್ವರಿ, ಜೆ.ಎಸ್.ಎಸ್‌ಕಲಾಮಂಟಪ ಪ್ರದರ್ಶಿಸಿದ ಶ್ರೀ ನಿಜಗುಣ ಶಿವಯೋಗಿ – ಪ್ರೊ. ಎ. ಎಸ್‌ಜಯರಾಂ, ತಿಪ್ಪೇರುದ್ರಸ್ವಾಮಿಅವರ ಮಕ್ಕಳ ಸಾಹಿತ್ಯ – ಪ್ರೊ. ಜಿ. ಅಶ್ವತ್ ನಾರಾಯಣ, ವಚನ ದೀಪ್ತಿ – ಕಮಲಾ ಹೆಮ್ಮಿಗೆ, ಮಾತೆಂಬುದುಜ್ಯೋತಿರ್ಲಿಂಗ – ಜಿ. ಕೆ ರವೀಂದ್ರಕುಮಾರ್, ಕಾಯಕ ತಪಸ್ವಿ – ಕೆ. ವೀರಭದ್ರ, ಕರ್ನಾಟಕ ಸಂಸ್ಕೃತಿ ಸಮೀಕ್ಷೆ – ಡಾ.ಸಿ ನಾಗಭೂಷಣ, ತೌಲನಿಕ ಕಾವ್ಯ ಮೀಮಾಂಸೆ – ಡಾ.ಪ್ರಸಾದ ಸ್ವಾಮಿಎಸ್, ಬಸವೇಶ್ವರ ವಚನ ದೀಪಿಕೆ – ಡಾ.ಎನ್. ಕೆ.ಕೋದಂಡರಾಮ, ಪ್ರತಾಪರುದ್ರೀಯಅನುವಾದಒಂದು ಸಮೀಕ್ಷೆ – ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಶೂನ್ಯ ಸಂಪಾದನೆ ಸಂವಾದ – ಡಾ.ಟಿ ಸುಬ್ರಹ್ಮಣ್ಯ, ಮಲೆನಾಡುಜಾನಪದ – ಡಾ. ಎಚ್.ಜೆ ಲಕ್ಕಪ್ಪಗೌಡ, ಇಂಗ್ಲಿಷ್‌ಅನುವಾದ ಕೃತಿಗಳು – ಪ್ರೊ. ಚಂದ್ರಶೇಖರಯ್ಯ, ಅಪ್ರಕಟಿತ ಕೃತಿಗಳು ಯೋಜನೆಗಳು – ಡಾ.ಎಚ್.ಟಿ ಶೈಲಜ. ಹೀಗೆ ಒಟ್ಟಾರೆ ಸಾಹಿತ್ಯವನ್ನು ವಿಮರ್ಶೆ ವಿಶ್ಲೇಷಣೆ ಮಾಡಿರುವ ಮುನ್ನೂರಕ್ಕೂಅಧಿಕ ವಿದ್ವಾಂಸರ ಪರಮಾರ್ಶನಯೋಗ್ಯ ಲೇಖನಗಳ ಸಂಗ್ರಹವಿದೆ.ಕೊನೆಯಲ್ಲಿ ಕದಳಿವನ ಸಂದರ್ಶನ, ಬದುಕಿನ ಹೆಜ್ಜೆಗಳು ಎಂಬ ವಿಷಯಗಳ ಜತೆಗೆಇನ್ನೂಐದುಅನುಬಂಧ ವಿಷಯಗಳನ್ನು ಸೇರಿಸಲಾಗಿದೆ.ಕನ್ನಡ ನಾಡಿನ ಈ ಧೀಮಂತರಅಭಿನಂದನಾ ಸಮಾರಂಭಕ್ಕೆಎಲ್ಲರೂ ಹಾಜರಿರುವುದೇಕೃತಜ್ಞತೆ. ಈ ಕೃತಿಗಳ ಒಳ ಅರಿವಿನ ವಿಶ್ಲೇಷಣೆ ಮುಂದುವರೆಯುವುದು.

ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಯುವಸಾಹಿತಿ, ಎಚ್.ಡಿಕೋಟೆ, ಮೈಸೂರು
ಮೊ.ನಂ:- ೮೮೮೪೬೮೪೭೨೬

Leave a Reply

Your email address will not be published. Required fields are marked *