ಚಾಮರಾಜನಗರ: ತಾಲೂಕಿನ ಬಿಸಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಢಳಿತ ಮಂಡಲಿ ನಿರ್ಧೇಶಕ ಸ್ಥಾನ ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮುಲಕ ದಾಖಲೆ ನಿರ್ಮಿಸಿದ್ದಾರೆ.
ಗ್ರಾಮದ ಡೇರಿ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಚುನಾವಣೆ ನಡೆದು ಬಿಜೆಪಿ ಹಾಗೂ ಕಾಂಗ್ರೇಸ್ ಬೆಂಬಲಿಗರು ಸ್ಪರ್ಧೆ ಮಾಡಿದ್ದರು. ಬಳಿಕ ಮತದಾನ ನಡೆದು ಬಿಜೆಪಿಯ 13 ಮಂದಿ ಹೆಚ್ಚು ಮತಗಳನ್ನು ಪಡೆದು ನಿರ್ಧೇಶಕರಾಗಿ ಆಯ್ಕೆಯಾಗಿದ್ದಾರೆ. ಕೈ ಬೆಂಬಲಿಗರು ಸೋಲು ಕಂಡಿದ್ದಾರೆ.
ಸಂಘದ ಐದು ವರ್ಷಗಳ ಅವಧಿಗೆ ನಿರ್ಧೆಶಕರಾಗಿ ಬಿ.ಬಿ. ನಾಗರಾಜು, ಸಿ. ರಾಜಶೇಖರ್, ಬಿ. ಶಿವಬಸಪ್ಪ, ಎನ್. ಬಸವಣ್ಣ, ಶಿವಬಸಪ್ಪ, ಮಹೇಶ್, ಮಹದೇವಸ್ವಾಮಿ, ರಾಚಶೆಟ್ಟಿ, ನಾಗರಾಜು, ರಾಚನಾಯಕ,ರವಿ, ರೂಪಶಾಂತಮಲ್ಲಪ್ಪ, ಮಂಜುಳರಾಜು ಅವರುಗಳು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಸುಭಾಷಿನಿ ಘೋಷಣೆ ಮಾಡಿದರು.
ವಿಜಯೋತ್ಸವ : ಬಿಜೆಪಿ ಬೆಂಬಲಿಗರು ಹೆಚ್ಚು ಮಂದಿ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯ ಕರ್ತರು, ಮುಖಂಡರು ಬಿಜೆಪಿ ಬಾವುಟ ಹಿಡಿದು, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಮುಖಂಡ ಬಿ. ನಂಜಪ್ಪ ಮಾತನಾಡಿ, ಗ್ರಾಮದ ಇತಿಹಾಸದಲ್ಲಿಯೇ ಇದೊಂದು ಅಭೂತಪೂರ್ವ ಗೆಲುವು. ಮಾಜಿ ಶಾಸಕ ದಿ. ಎಸ್ ಪುಟ್ಟಸ್ವಾಮಿ ಅವರ ಕಾಲದಿಂದಲೂ ಗ್ರಾಮ ಕಾಂಗ್ರೆಸ್ ಭದ್ರಕೋಟೆ ಯಾಗಿತ್ತು. ಇದನ್ನು ಪಕ್ಷದ ಕಾರ್ಯಕರ್ತರು ಪರಿಶ್ರಮ ಪಟ್ಟು ಡೇರಿ ಆಡಳಿತವನ್ನು ಹಿಡಿಯುವ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿರುವುದು ಮುಂಬರುವ ಚುನಾವಣೆ ಗಳಿಗೆ ದಿಕ್ಸೂಚಿಯಾಗಿದೆ. ಮುಂದೆ ಬರುವ ಲೋಕಸಭೆ, ಸಹಕಾರ ಸಂಘ, ಜಿ.ಪಂ. ತಾ.ಪಂ. ಚುನಾವಣೆಗಳಲ್ಲಿ ನಮ್ಮ ಶಕ್ತಿ ಪ್ರರ್ದಶನಕ್ಕೆ ಹುಮ್ಮಸ್ಸು ಹೆಚ್ಚಿಸಿದೆ ಎಂದರು
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಎಂ.ಕುಮಾರ್, ನಾಗಮ್ಮ ಶಿವಣ್ಣ, ಬಿ.ಎಸ್. ಅನಿಲ್, ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಸಿ.ರಾಜು, ಎಸ್. ರವಿಕುಮಾರ್, ಶಿವಮಲ್ಲಪ್ಪ, ಶಿವಕುಮಾರ್, ಮುನೀಷ್ ನಾಯಕ್, ಕರಿ ನಾಯಕ, ಮಹದೇವಶೆಟ್ಟಿ, ಬಸವರಾಜು, ಬೆಳ್ಳಶೆಟ್ಟಿ, ಪ್ರತಾಪ್, ಕುಮಾರ್, ಮಿಲ್ ಉಮೇಶ್ ಬಸವಣ್ಣ, ಸಿದ್ದ ನಾಯಕ, ಬಸವರಾಜು, ಡಿ.ಪ್ರಕಾಶ್, ಸೋಮನಾಯಕ ಹಾಗೂ ಎಲ್ಲಾಕೋಮಿನ ಯಜಮಾನರು, ಮುಖಂಡರು, ಸಂಘದ ಸದಸ್ಯರು ಇದ್ದರು.
ಚಾಮರಾಜನಗರ ತಾಲೂಕಿನ ಬಿಸಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಢಳಿತ ಮಂಡಲಿ 13 ಮಂದಿ ಬಿಜೆಪಿ ಬೆಂಬಲಿತರ ನಿರ್ದೇಶಕರು ಗೆಲುವು ಸಾಧಿಸಿ, ಸಂಭ್ರಮಾಚರಣೆ ಮಾಡಿದರು.