ಮೈಸೂರು: :“ಕ್ಲೌಡ್ ಕಂಪ್ಯೂಟಿಂಗ್ ಅತಿ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದ್ದು, ಇಂದಿನ ಯುವ ಪೀಳಿಗೆಯ ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ವಿಪುಲ ಅವಕಾಶಗಳು ಲಭ್ಯವಾಗಲಿವೆ. ಡೀಪ್ಟೆಕ್ ತಂತ್ರಜ್ಞಾನವು ಇನ್ನೇನು ಭಾರತಕ್ಕೆ ಕಾಲಿಡಲಿದ್ದು ಭಾರತೀಯರಿಗೆ ಸಂಶೋಧನಾ ಕ್ಷೇತ್ರದಲ್ಲಿನ ಸಾಧ್ಯತೆಗಳು ವಿಸ್ತಾರಗೊಳ್ಳಲಿವೆ. ಈ ಸಾಧ್ಯತೆಗಳಿಗೆ ತಕ್ಕ ವಾತಾವರಣ, ಸೌಲಭ್ಯಗಳು ಹೆಚ್ಚಾಗಲಿದ್ದು ಭಾರತದಲ್ಲಿ ನಗರೀಕರಣ ಬೆಳೆಯಲಿದೆ” ಎಂದು ಕ್ಯಾಟಮಾರನ್ ವೆಂಚರ್ಸ್ನ ಚೇರ್ಮನ್ ಎಮ್.ಡಿ.ರಂಗನಾಥ್ಹೇಳಿದರು.
ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ ಹಾಗೂ ಐಇಇಇ ಸಹಯೋಗದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಇನ್ ಎಮಜಿರ್ಂಗ್ ಮಾರ್ಕೆಟ್ನ ಕುರಿತ 12 ನೇ ಐಇಇಇ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿನ ವಿವಿಧ ಸವಾಲುಗಳು ಹಾಗೂ ಅವುಗಳ ಸಂಶೋಧನಾ ಸಾಧ್ಯತೆಗಳ ಕುರಿತು ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು. ‘50%ಗಿಂತಲೂ ಹೆಚ್ಚು ಕಂಪನಿಗಳು ಕ್ಲೌಡ್ನಲ್ಲಿ ತಮ್ಮ ವರ್ಕ್ಸ್ಟೋರೇಜ್ನ್ನು ಹೊಂದಿದ್ದು ಮಾಹಿತಿಯನ್ನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಜಾಸ್ತಿಯಾಗಿದೆ. ‘ಮಿಸ್ಕಾನ್ ಫಿಗರೇಶನ್’ ಇಂದಿನ ಬಹುತೇಕ ಕಂಪನಿಗಳು ಎದುರಿಸುತ್ತಿರುವ ಬಹುದೊಡ್ಡ ಸುರಕ್ಷತಾ ಸವಾಲಾಗಿದೆʼ ಎಂದು ಅವರು ಹೇಳಿದರು. ಕ್ಲೌಡ್ನಲ್ಲಿ ಹೆಚ್ಚಿನ ಕಾರ್ಯನಡೆಯುತ್ತಿದ್ದು, ಅದರ ಕಾರ್ಯನಿರ್ವಹಣೆ ಕ್ಷಮತೆ ಹಾಗೂ ಕ್ಲೌಡ್ ಮೈಗ್ರೇಶನ್ ಬಗ್ಗೆ ಸಂಶೋಧನೆಗಳಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಂಗಳೂರಿನ ಪ್ರಗ್ಯಾನ್ಡೇಟಾ ಲ್ಯಾಬ್ಸ್ನ ಸಂಸ್ಥಾಪಕ ಅಧ್ಯಕ್ಷಟಿ.ಎಸ್. ಮೋಹನ್ ಮಾತನಾಡಿ, ʼಭಾರತವುವಿನೂತನವಾಗಿಉದಯಿಸುತ್ತಿದೆ. ಇಂತಹಸಮಯದಲ್ಲಿ ಇಂದಿನ ಯುವ ಮನಸ್ಸುಗಳನ್ನು ಸರಿಯಾದ ರೀತಿಯಲ್ಲಿ ಪೆÇೀಷಿಸುವುದು ತುಂಬಾ ಅಗತ್ಯವಾಗಿದೆ. ಐಇಇಇ ವಿಚಾರ ಸಂಕಿರಣ ಇದಕ್ಕೆ ಉತ್ತಮ ವೇದಿಕೆಯಾಗಿದ್ದು, ಕ್ಷೇತ್ರ ಪರಿಣತರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಸೂಕ್ತಮಾರ್ಗದರ್ಶನ ದೊರೆಯಲಿದೆʼಎಂದು ತಿಳಿಸಿದರು.
ಇಂದಿನ ಸಂಶೋಧನಾ ಪ್ರಬಂಧಗಳ ಗುಣಮಟ್ಟದ ಬಗ್ಗೆ ಮಾತನಾಡಿದ ಟಿ.ಎಸ್. ಮೋಹನ್, ಇಂದಿನ ಸಂಶೋಧನೆಗಳ ಗುಣಮಟ್ಟದಲ್ಲಿ ಸ್ವಲ್ಪ ವ್ಯತ್ಯಾಸವಿದ್ದು, ಸಂಶೋಧನೆಯಲ್ಲಿ ಪ್ರಸ್ತಾಪಿತವಾದ ವಿಷಯಕ್ಕೆ ಸೂಕ್ತ ಪುರಾವೆ, ಸಾಕ್ಷಿಗಳನ್ನೊದಗಿಸುವುದು ಅವಶ್ಯಕವಾಗಿದೆ. ಈ ವಿಚಾರ ಸಂಕಿರಣದಲ್ಲಿ ಸಂಶೋಧಕರಿಗೆ ಕ್ಷೇತ್ರ ಪರಿಣತರು ಹಾಗೂ ಶೈಕ್ಷಣಿಕ ಕ್ಷೇತ್ರದ ವಿಷಯತಜ್ಞರಿಂದ ಸಲಹೆ ಸೂಚನೆಗಳು ದೊರೆಯುತ್ತವೆಎಂದರು.
ಅಮೃತ ವಿಶ್ವವಿದ್ಯಾಪೀಠಂ ಮೈಸೂರುಕ್ಯಾಂಪಸ್ನ ಅಸೋಸಿಯೇಟ್ ಡೀನ್ ಪೆÇ್ರ.ಶೇಖರ್ ಬಾಬು ವಿಚಾರ ಸಂಕಿರಣದ ವೈಶಿಷ್ಟ್ಯತೆಗಳ ಬಗ್ಗೆ ತಿಳಿಸಿದರು. ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ವೊಂದರಲ್ಲಿ ಐಇಇಇ ವಿಚಾರ ಸಂಕಿರಣ ನಡೆಯುತ್ತಿದ್ದು, ಅಮೃತ ಮೈಸೂರು ಕ್ಯಾಂಪಸ್ ಈ ಕಾನ್ಫರೆನ್ಸ್ನ ಪ್ಲಾಟಿನಂ ಸ್ಪಾನ್ಸರ್ಆಗಿದೆ. ಸಂಶೋಧನೆ ಹಾಗೂ ಸ್ಟೂಡೆಂಟ್ ಪ್ರಾಜೆಕ್ಟ್ಗಳಿಗೆ ಹೆಚ್ಚಿನಆದ್ಯತೆ ನೀಡಲಾಗಿದೆ.
ಔದ್ಯೋಗಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಷಯತಜ್ಞರು ಈ ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ ಎಂದುಕಾನ್ಫರೆನ್ಸ್ನ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.
ಉದ್ಘಾಟನ ಕಾರ್ಯಕ್ರಮದಲ್ಲಿ ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ಸಂಚಾಲಕರಾದ ಬ್ರಹ್ಮಚಾರಿ ಮುಕ್ತಿದಾಮ್ರತ ಚೈತನ್ಯ, ಪ್ರಾಂಶುಪಾಲ ಜಿ.ರವೀಂದ್ರನಾಥ್, ವಿವಿಧ ಗೋಷ್ಠಿಗಳ ಪ್ರಧಾನ ಭಾಷಣಕಾರರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.