ಮಹಿಳೆಯರು ಸ್ವಾವಲಂಬಿಗಳಾಬೇಕು : ಮಲ್ಲಿಕಾರ್ಜುನಸ್ವಾಮಿ

ಚರ್ಮ ಉತ್ಪನ್ನಗಳ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ಚಾಮರಾಜನಗರ: ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು  ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಸಲಹೆ ನೀಡಿದರು.

ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಸೇವಾ ಭಾರತಿ ಶಾಲೆಯ ಸಭಾಂಗಣದಲ್ಲಿ ಡಾ.ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ-ಲಿಡ್ಕರ್  ಹಾಗೂ ಸಾಮಾಜಿಕ ನ್ಯಾಯ ವೇದಿಕೆಯ ಸಹಯೋಗದಲ್ಲಿ ೬೦ ದಿನಗಳ ಕಾಲ  ಚರ್ಮ ಉತ್ಪನ್ನಗಳ ತಯಾರಿಕಾ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

೬೦ ದಿನಗಳ ಕಾಲ ಚರ್ಮ ಉತ್ಪನ್ನಗಳ ತಯಾರಿಕಾ ತರಬೇತು ಪಡೆದಿರುವ ಶಿಬಿರಾರ್ಥಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಸರ್ಕಾರವು ಬ್ಯಾಂಕ್‌ಗಳ ಮೂಲಕ ಸ್ವಯಂ ಉದ್ಯೋಗ ಸ್ಥಾಪನೆಗಾಗಿ ಸಬ್ಸಿಡಿ ಸಾಲಸೌಲಭ್ಯಗಳನ್ನು ನೀಡುತ್ತಿದೆ ಇಂತಹ ಅವಕಾಶವನ್ನು ತಾವು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಡಾ.ಸವಿತಾ ಮಾತನಾಡಿ, ಲಿಡ್ಕರ್‌ನಲ್ಲಿ ತುಂಭಾ ಉತ್ಕೃಷ್ಠವಾದ ವಸ್ತುಗಳಿವೆ. ಬ್ರಾಂಡೆಂಡ್ ಕಂಪನಿಗಳ ಸಾವಿರಾರು ರೂ. ಮೌಲ್ಯ ಇರುವಂತಹ ವಸ್ತುಗಳನ್ನು ದೊಡ್ಡ ದೊಡ್ಡ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ. ಸ್ಥಳೀಯ ಲೀಡ್ಕರ್ ಸಂಸ್ಥೆಯಿಂದ ಆಗಿರುವಂತ ಉತ್ಪನ್ನಗಳು ಅತ್ಯಂತ ಉತ್ಕೃಷ್ಠ ಮಟ್ಟದಾಗಿದ್ದು, ಮೌಲ್ಯಯುತವಾಗಿದೆ. ತರಬೇತಿಯಿಂದ ಸಾಕಷ್ಠು ಅನುಕೂಲವಾಗಿದೆ. ತರಬೇತಿಯಲ್ಲಿ ನೀಡಿರುವ ಸಲಕರಣಿಗಳನ್ನು ಸಮರ್ಥವಾಗಿ ಬಳಸಿಕೊಂಡು ಅಭಿವೃದ್ದಿ ಹೊಂದಬೇಕು ಜತೆಗೆ ಈ ಶ್ರಮ ಕಾರ್ಡ್ ಮಾಡಿಸಿಕೊಳ್ಳಬೇಕು ಇದರಿಂದ ಸಾಕಷ್ಠು ಪ್ರಯೋಜನ ಇದೆ ಎಂದರು.

ಸಾಮಾಜಿಕ ನ್ಯಾಯ ವೇದಿಕೆ ಮುಖ್ಯಸ್ಥ  ಸತೀಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಉದ್ಯಮಿ ಡಾ
ರವಿಪ್ರಕಾಶ್,ಲಿಡ್ಕರ್ ಸಂಸ್ಥೆಯ ಸಂಯೋಜಕರಾದ ಜಯರಾಮಯ್ಯ ಸಾಮಾಜಿಕ ನ್ಯಾಯ ವೇದಿಕೆ  ಕೇಂದ್ರ ಸಮಿತಿ ಸದಸ್ಯರಾದ ಜಗದೀಶ್, ಪುಟ್ಟಸ್ವಾಮಿ, ಬಸವರಾಜು, ರಘು, ಮಹದೇವಸ್ವಾಮಿ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *