ಮಾದಪ್ಪನ ಭಕ್ತರೊಂದಿಗೆ ಭೋಜನ ಸವಿದ ಕಾರ್ಯದರ್ಶಿ ಸರಸ್ವತಿ

ಕೊಳ್ಳೇಗಾಲ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಹೊತ್ತ ಮಾದಪ್ಪನ ಭಕ್ತರು ಪರ ಮಾಡಿ ಸಾಮೂಹಿಕ ಊಟ ಮಾಡುತ್ತಿದ್ದ ಭಕ್ತರ ಜತೆಯಲ್ಲಿಯೇ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಊಟ ಸವಿದರು.

ಮಂಗಳವಾರ ಮಲೆ ಮಹದೇಶ್ವರ ಬೆಟ್ಟದ ಮುಡಿ ಶೆಡ್ಡಿನ ಮೇಲ್ಭಾಗದಲ್ಲಿ ಶೆಡ್ಡಿನ ಕೆಳಗೆ ಭಕ್ತರು ಅನ್ನ ಸಾಂಬಾರ್, ಕಜ್ಜಾಯ, ಪಾಯಸ, ಕಡಲೆಹುಳಿ, ಪಲ್ಯ ಅಡುಗೆ ತಯಾರಿ ಮಾದಪ್ಪನಿಗೆ ಪೂಜೆ ಸಲ್ಲಿಸಿ ನಂತರ ಸಾಮೂಹಿಕ ಊಟಕ್ಕೆ ಕುಳಿತಿದ್ದರು.

ಇದೇ ಸಮಯದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಹೆಚ್ಚು ಭಕ್ತರು ಆಗಮಿಸಿರುವುದರಿಂದ ವ್ಯಾಪಾರ ಮಾಡುವ ಸ್ಥಳ, ಮುಡಿ ಸ್ಥಳ ಅಂತರಗಂಗೆ ದೇವಸ್ಥಾನದ ಪೂಜಾ ಕೈಂಕರ್ಯಗಳು, ಸುತ್ತಮುತ್ತಲು ವೀಕ್ಷಣೆ ಮಾಡಲು ತೆರಳಿದ್ದ ಕಾರ್ಯದರ್ಶಿ ಸರಸ್ವತಿ ಅವರು ಗುಂಡ್ಲುಪೇಟೆ ತಾಲೂಕಿನ ಗ್ರಾಮಸ್ಥರು ಅಡುಗೆ ತಯಾರು ಮಾಡುತ್ತಿದ್ದನ್ನು ನೋಡಿ ಅಲ್ಲಿಗೆ ತೆರಳಿ ಊಟ ಮಾಡಿದರು. ಭಕ್ತರು ಸರಸ್ವತಿ ಅವರ ಸರಳತೆಗೆಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *