ಮಾರಮ್ಮ ತಾಯಿ ದೇವಸ್ಥಾನದಲ್ಲಿ ಗಣಪತಿಹೋಮ, ಚಂಡಿಕಾ ಹೋಮ

ಚಾಮರಾಜನಗರ: ನಗರದ ಅಧಿ ದೇವತೆ, ಗ್ರಾಮ ದೇವತೆ ಶ್ರೀ ಮುದುಕ ಮಾರಮ್ಮ ತಾಯಿ ಸನ್ನಿಧಿಯಲ್ಲಿ ಶುಕ್ರವಾರ ಲೋಕ ಕಲ್ಯಾಣಕ್ಕಾಗಿ ಚಂಡಿಯಾಗ, ಗಣಪತಿ ಹೋಮ, ಪಂಚಾಮೃತ ರುದ್ರಾಭಿಷೇಕ, ಮಹಾ ಪೂರ್ಣಾಹುತಿ ಕಾರ್ಯ ಅದ್ದೂರಿಯಾಗಿ ನೆರವೇರಿಸಲಾಯಿತು.

ಲೋಕ ಕಲ್ಯಾಣಾರ್ಥಕ್ಕಾಗಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲೀವಾಹನ ಶಕವರ್ಷಂ ೧೯೭೫ ನೇ ಶ್ರೀ ಶೋಭಕೃನಾಮ ಸಂವತ್ಸರದ ನಿಜ ಶ್ರಾವಣ ಬುಹುಶ ನವಮಿ ಅಂಗವಾಗಿ ನಗರದ ಹಳೆಯ ಬಸ್ ನಿಲ್ದಾಣದಲ್ಲಿರುವ ಗ್ರಾಮದೇವತೆ ಶ್ರೀಮುದುಕು ಮಾರಮ್ಮನವರ ದೇವಾಲಯದಲ್ಲಿ ಶುಕ್ರವಾರ ಗಣಪತಿ ಹೋಮ, ಚಂಡಿಕಾ ಹೋಮ ಯಶ್ವಸಿಯಾಗಿ ನೆರವೇರಿತು.

ವೇದ ಬ್ರಹ್ಮಶ್ರೀ ಪಾಲಾಕ್ಷ ಭರದ್ವಾಜ್ ಅವರ ನೇತೃತ್ವದಲ್ಲಿ ಹೋಮ ಕಾರ್ಯ ನಡೆಸಲಯಿತು. ಕಾರ್ಯಕ್ರಮದ ಅಂಗವಾಗಿ ದೇವಸ್ಥಾನವನ್ನು ವಿವಿಧ ಪುಷ್ಷಗಳಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಬೆಳಿಗ್ಗೆ ೬ ಗಂಟೆಗೆ ಪೂಜಾ ಕಾರ್ಯ ಪ್ರಾರಂಭವಾಗಿ ದೇವತಾ ಅನುಜ್ಞಾಗೋಪೂಜೆ, ಗಣಪತಿಪೂಜೆ, ಹೋಮ, ಚಂಡಿಕಾಹೋಮ, ಪೂಜ್ಯಾಹ, ದೇವಾನಾಂದಿ, ಕಳಸಸ್ಥಾಪನೆ, ಸೂಕ್ತ ಪಾರಾಯಣಗಳು, ಮಾರಮ್ಮ ತಾಯಿಗೆ ಪಂಚಾಮೃತ ಅಭಿಷೇಕ, ಪೂರ್ಣಾವತಿ ಕಾರ್ಯಕ್ರಮ ನಡೆಯುತ್ತದೆ. ಭಕ್ತಾರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ದೇವರದರ್ಶನ ಪಡೆದು ಪುನೀತರಾದರು.

ವೇದ ಪಾರಾಯಣದೊಂದಿಗೆ ಪ್ರಾರಾಂಭವಾದ ಪೂಜಾಕಾರ್ಯ ಕಳಸ ಸ್ಥಾಪನೆ, ನಾಂದಿ, ಹಾಗೂ ಮಾರಮ್ಮ ತಾತಿಗೆ ಪಂಚಾಮೃತ ಅಭಿಷೇಕ , ಕ್ಷೀರ ಅಭಿಷೇಕ, ಮಾರಮ್ಮ ತಾಯಿಗೆ ವಿಶೇಷ ಪುಷ್ಪಗಳಿಂದ ಅಲಂಕಾರವನ್ನು ಪ್ರದಾನ ಅರ್ಚಕರಾದ ಪಾಲಕ್ಷ ಭಾರದ್ವಾಜ್ ರವರ ಸಮ್ಮುಖದಲ್ಲಿ ನಡೆಯಿತು.


ಪೂಜಾಕಾರ್ಯದಲ್ಲಿ ವಿಪ್ರ ರಿಂದ ವೇದಗೋಷ ಮತ್ತು ಅಷ್ಟೋತ್ತರ ಮಹಾಮಂಗಳಾರತಿ ಭಕ್ತಿಯಿಂದ ಜರುಗಿತು. ಮಹಿಳೆಯರು ಹಾಗೂ ಮಕ್ಕಳಿಗೆ ಮಾರಮ್ಮ ತಾಯಿಯ ಪ್ರಸಾದವನ್ನು ನೀಡಲಾಯಿತು. ಸಾವಿರಾರು ಭಕ್ತಧಿಗಳು ದೇವರ ದರ್ಶನ ಪಡೆದರು.

ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ ಮಾಡಲಾಯಿತು. ನಂತರ ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

Leave a Reply

Your email address will not be published. Required fields are marked *