ಚಾಮರಾಜನಗರ: ಕಾಡಂಚಿನ ಗ್ರಾಮದಲ್ಲಿರುವ ಮೂಕನಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭೭ ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಎಸ್ಡಿಎಂಸಿ ಅಧ್ಯಕ್ಷೆ ಶಾಂತಿಬಾಯಿ ನಾಗೇಶ್ ಧ್ವಜಾರೋಹಣ ನೇರವೇರಿಸಿದರು.
ಬಳಿಕ ನಡೆದ ಸ್ವಾತಂತ್ರ್ಯ ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷೆ ಶಿವಿಬಾಯಿ ಗಣೇಶ್ನಾಯ್ಕ್ ಉದ್ಘಾಟಿಸಿ ಮಾತನಾಡಿ, ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋದ ಈ ದಿನವನ್ನು ಸ್ವಾತಂತ್ರ್ಯ ದಿನವೆಂದು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ. ಅನೇಕ ಮಹನೀಯರ ತ್ಯಾಗ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಮಕ್ಕಳು ಸ್ವಾತಂತ್ರ್ಯೋತ್ಸವನ್ನು ಆಚರಣೆ ಮಾಡುವ ಜೊತೆಗೆ ವೀರ ಯೋಧರು, ಸ್ವಾತಂತ್ರ ಹೋರಾಟಗಾರರು, ದೇಶಪ್ರೇಮ, ಪ್ರಾಮಾಣಿಕತೆ, ದೇಶಭಕ್ತಿಯ ಬಗ್ಗೆ ತಿಳಿದು ಕೊಂಡು ಅವರಂತೆ ನಡೆದು ದೇಶಕ್ಕಾಗಿ ನಾವು ಕೊಡುಗೆ ನೀಡುತ್ತೇವೆ ಎಂಬ ಹುಮ್ಮಸ್ಸು ತಮ್ಮಲ್ಲಿ ಮೂಡಬೇಕು ಎಂದರು.
ಕಾರ್ಯಕ್ರಮದ ಬಳಿಕ ಶಾಲೆ ಮಕ್ಕಳಿಂದ ವಿವಿಧ ನೃತ್ಯಗಳು ನಡೆದವು. ಪುಟಾಣಿಗಳು ಲಂಬಾಣಿ ವೇಷ ತೊಟ್ಟು ನೃತ್ಯ ಮಾಡುವ ಮೂಲಕ ಪೇಕ್ಷಕರ ಗಮನ ಸೆಳೆದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಸದಸ್ಯ ಪಿ. ಕುಮಾರ್ ನಾಯಕ, ಎಸ್ಡಿಎಂಸಿ ಉಪಾಧ್ಯಕ್ಷ ಉಮಾಶಂಕರ್, ಯ.ಶಿವರಾಜನಾಯ್ಕ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮುತ್ತು ನಾಯ್ಕ, ಗ್ರಾ.ಪಂ. ಸದಸ್ಯ ಪಿ. ನಾಗನಾಯ್ಕ್, ರಾಜೇಂದ್ರ, ಗುಡಿ ಯಜಮಾನ ಟಿ.ಕುಮಾರ್. ಯ. ಸಿದ್ದನಾಯ್ಕ, ನಾಗರಾಜು, ಮುಖ್ಯ ಶಿಕಕ ರಘು ಕುಮಾರ್, ರಾಘವೇಂದ್ರ, ಶಿಕ್ಷಕಿ ಸೋನು, ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.