ಚಾಮರಾಜನಗರ: ತಾಲೂಕಿನ ಹರವೆ ಹೋಬಳಿ ವ್ಯಾಪ್ತಿಗೆ ಸೇರಿದ ಮೂಡ್ನಾಕೂಡು ಗ್ರಾಮ ಕಂದಾಯಾಧಿಕಾರಿ ಮಣಿಕಂಠ ಕಳೆದ ೧೦ ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿ, ಬೇರೆಡೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೋಟ್ಟರು.
ಗ್ರಾಮದ ಶಾಲೆಯ ಅವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ರಾಜಪ್ಪ ಹಾಗು ಸದಸ್ಯರು ಗ್ರಾಮ ಆಡಳಿತಾಧಿಕಾರಿ ಮಣಿಕಂಠ ಅವರ ಸೇವೆಯನ್ನು ಶ್ಲಾಘಿಸಿ, ಶಾಲು ಹೊದಿಸಿ, ಹಾರ ಹಾಕಿ. ಫಲತಾಂಬುಲ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಪ್ಪ ಅವರು, ಮಣಿಕಂಠ ಅವರು ಕಳೆದ ೧೦ ವರ್ಷಗಳ ಹಿಂದೆ ನಮ್ಮ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಬಂತು ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರ ರಾಗಿದ್ದರು. ರೈತರು, ವಿದ್ಯಾರ್ಥಿಗಳು ಹಾಗು ಸಾರ್ವಜನಿಕರೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದಿ, ಇಲಾಖೆ ಹಾಗೂ ಗ್ರಾಮಕ್ಕೆ ಕೀರ್ತಿ ಬರುವಂತೆ ಸೇವೆ ಸಲ್ಲಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸಸ್ಯರಾದ ರಾಜಪ್ಪ, ಪಾರ್ವತಮ್ಮ, ಗಿರೀಶ್, ನಾಗೇಂದ್ರ, ಮಾದೇಶ್, ಪಂಕಜ, ಮುಖಂಡರಾದ ಎಂ.ಸಿ.ಮಲ್ಲಣ್ಣ, ಎಂ. ನಾಗಪ್ಪ, ಹಾಗೂ ಗ್ರಾಮಸ್ಥರು ಇದ್ದರು.