ಯುವಶಕ್ತಿ ಪರಿಷತ್‌ನಿಂದ ಪುರುಷೋತ್ತಮ ಅಯ್ಯಂಗಾರ್ ಅವರಿಗೆ ಸನ್ಮಾನ

ಚಾಮರಾಜನಗರ: ನಗರದ ಹೊರ ವಲಯದಲ್ಲಿರುವ ಶ್ರೀ ಕರಿವರದರಾಜಸ್ವಾಮಿ ಬೆಟ್ಟದಲ್ಲಿ ಸುಮಾರು ದಶಕಗಳಿಂದ ವಂಶಪಾರಂಪರ್ಯವಾಗಿ ಶ್ರೀದೇವಿ ಭೂದೇವಿ ಸಮೇತ ಕರಿವರದರಾಜಸ್ವಾಮಿ ದೇವಸ್ಥಾನದ ಪೂಜೆ ಕೈಂಕರ್ಯಗಳನ್ನು ನಡೆಸುತ್ತಿರುವ ಪುರುಷೋತ್ತಮ ಅಯ್ಯಂಗಾರ್ ಅವರನ್ನು ಯುವಶಕ್ತಿ ಪರಿಷತ್ ವತಿಯಿಂದ ನೆನಪಿನ ಕಾಣಿಕೆ ಫಲತಾಂಬುಲ ನೀಡಿ ಸನ್ಮಾನಿಸಲಾಯಿತು.

ಯುವ ಶಕ್ತಿ ಪರಿಷತ್‌ನ ಅಧ್ಯಕ್ಷ ಎಲ್. ಸುರೇಶ್ ಅರ್ಚಕರಾದ ಪುರುಷೊತ್ತಮ್ ಅವರನ್ನು ಸನ್ಮಾನಿಸಿ ಮಾತನಾಡಿ, ಬಹಳ ವರ್ಷಗಳಿಂದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಪುರುಷೋತಮ್ ಅವರ ಸೇವೆ ಅನನ್ಯ. ಭಕ್ತರು ಸಹಕಾರದಿ, ಶ್ರಾವಣ ಶನಿವಾರದ ವಿಶೇಷ ದಿನಗಳು ಹಾಗೂ ಇತರೇ ವಿಶೇಷ ದಿನಗಳಲಿ ಶ್ರೀದೇವಿ ಭೂದೇವಿ ಸಮೇತ ಕರಿವರದರಾಜಸ್ವಾಮಿಗೆ ಪೂಜೆ ಕೈಕಂಕಾರ್ಯಗಳನ್ನು ನಡೆಸುವ ಭಕ್ತರಿಗೆ ಉತ್ತಮವಾದ ಸೇವೆ ನೀಡುತ್ತಾ ಬಂದಿದ್ದಾರೆ. ದೇವಸ್ಥಾನದ ಸುತ್ತಮುತ್ತ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಜೊತೆಗೆ ಪ್ರತಿದಿನ ಪೂಜೆ ಸಲ್ಲಿಸುವ ಕಾಯಕ ನಿಷ್ಟೆರಾಗಿದ್ದಾರೆ ಎಂದರು.

ಆದರೆ, ಅವರಿಗೆ ಮುಜರಾಯಿ ಇಲಾಖೆಯಿಂದ ಸಂಭಾವನೆಯಾಗಿ ೫ ರೂ. ಬರುತ್ತಿದೆ. ಬಹಳ ವರ್ಷಗಳಿಂದ ಈ ಹಣ ಪರಿಷ್ಕರಣೆಯಾಗಿಲ್ಲ. ರಾಜ್ಯ ಸರ್ಕಾರ ಹಾಗೂ ಮುಜರಾಯಿ ಇಲಾಖೆಯ ಅರ್ಚಕರ ಗೌರವ ಸಂಭಾವನೆಯನ್ನು ಹೆಚ್ಚು ಮಾಡಬೇಕೆಂದು ಮನವಿ ಮಾಡಿದರು.

ಶ್ರಾವಣ ಮಾಸದ ಶನಿವಾರ ವಿಶೇಷ ಪೂಜೆ ಕಾರಣದಿಂದ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಭಕ್ತರ ಸಹಕಾರದಿಂದ ಇಪ್ಪತ್ತಕ್ಕೂ ಹೆಚ್ಚು ಕತ್ತೆಗಳ ಮೂಲಕ ಸಿಮೆಂಟ್, ಜಲ್ಲಿ, ಟೈಲ್ಸ್‌ಗಳು ಇತರೇ ಸಲಕರಣೆಗಳನ್ನು ಬೆಟ್ಟದ ಮೇಲಕ್ಕೆ ಸಾಗಿಸಿ ಭಕ್ತರೇ ದೇವಸ್ಥಾನವನ್ನು ಅಭಿವೃದ್ದಿಪಡಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಕ್ತಿವೇಲು ಶಾಸ್ತಿ , ಡಾ. ಮಂಜು, ಸ್ನೇಹ, ಗಂಗಾ, ಶಿವಲ್ಲೇಶ್ ಚಿರಾಗ್ ಚಿರಾಯು, ಜಾನವಿ ಮತ್ತು ಅನೇಕ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *