ಶಿಕ್ಷಕ ವೃತ್ತಿ ಅತ್ಯಂತ ಪ್ರವಿತ್ರವಾದ ಸತ್ಪ್ರಜೆಗಳನ್ನು ರೂಪಿಸುವ ವೃತ್ತಿ : ಬಿ.ಕೆ. ರವಿಕುಮಾರ್

ಶಿಕ್ಷಕರ ದಿನಾಚರಣೆ : ಹಿರಿಯ ಶಿಕ್ಷಕರಾದ ಸಿ.ಎನ್. ಮಲ್ಲಣ್ಣ ಅವರಿಗೆ ಸನ್ಮಾನ
ಚಾಮರಾಜನಗರ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾನ್ನಾಗಿ ರೂಪಿಸುವ ಸೇವಾ ಮನೋಭಾವನೆಯುಳ್ಳಂತಹ ವೃತ್ತಿಯಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಬಣ್ಣಿಸಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಸಿ.ಎನ್. ಮಲ್ಲಣ್ಣ ನಿವಾಸಕ್ಕೆ ತೆರಳಿ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಲ್ಲಾ ಮೆಚ್ಚುಗೆ ಶಿಕ್ಷಕರಾದ ಸಿ.ಎನ್.ಮಲ್ಲಣ್ಣ ಅವರನ್ನು ಶಾಲು ಹೊದಿಸಿ, ಹಾರ ಹಾಕಿ ಫಲತಾಂಬುಲ ನೀಡಿ ಅಭಿನಂದಿಸಿ ಅವರು ಮಾತನಾಡಿದರು.

ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಭೂಗೋಳ ಶಿಕ್ಷಕರಾಗಿದ್ದ ಮಲ್ಲಣ್ಣ ಅವರು ಶಿಸ್ತಿನ ಸಿಪಾಯಿ. ಮಕ್ಕಳಲ್ಲಿ ಶಿಕ್ಷಣ ಜೊತೆಗೆ ಶಿಸ್ತು ಮತ್ತು ಓದುವ ಹವ್ಯಾಸವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನನ್ನಂಥ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದ ಮಲ್ಲಣ್ಣ ಅವರು ನಿವೃತ್ತಿ ಹೊಂದಿ ೩೦ ವರ್ಷಗಳ ಕಳೆದಿದ್ದು, ಅವರ ಸೇವೆಯನ್ನು ಪುರಸ್ಕೃರಿಸಿ, ಇಂದು ಶಿಕ್ಷಕರ ದಿನ ಅಚರಣೆಯ ಸಂದರ್ಭದಲ್ಲಿ ಅಭಿನಂದಿಸಲಾಗುತ್ತಿದೆ ಎಂದರು.

ಮಲ್ಲಣ್ಣ ಅವರ ಸೇವಾ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ, ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅವರ ಪಾಠ ಕೇಳುವುದು ಎಂದರೆ ಬಲು ಪ್ರೀತಿ. ಜೊತೆಗೆ ಮಕ್ಕಳಲ್ಲಿ ಪಾಠ ಮಾಡುತ್ತಲೇ ಶಿಸ್ತು ರೂಢಿಸಿಗೊಳ್ಳುವಂತೆ ಮನಃ ಪರಿವರ್ತನೆ ಮಾಡುತ್ತಿದ್ದರು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದವಾಗಿದೆ. ಅಂಥ ಯುವ ಪೀಳಿಗೆಗೆಯನ್ನು ಸೃಷ್ಟಿಸುವ ಗುರುತಾರ ಜವಾಬ್ದಾರಿಯು ಶಿಕ್ಷಕರಾದ್ದಾಗಿದೆ.
ಇತ್ತೀಚಿನ ದಿನಗಳಲ್ಲಿ ಸ್ವಾರ್ಥ, ಜಾತಿಯತೆ, ಭ್ರಷ್ಟಾಚಾರವೇ ಹೆಚ್ಚಾಗುತ್ತಿದೆ. ಇದಕ್ಕೆ ಹೊರತಾಗಿ ಶಿಕ್ಷಣ ಕ್ಷೇತ್ರ ಭಾರತ ಸತ್ಜ್ರಜೆಗಳನ್ನು ರೂಪಿಸುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಲು ಇಂಥ ಶಿಕ್ಷಕರು ಲಕ್ಷಾಂತರ ಸಂಖ್ಯೆಯಲ್ಲಿ ಸೃಷ್ಟಿಯಾಗಬೇಕು. ಶಿಕ್ಷಣ ವೃತ್ತಿಯ ಪ್ರಾವಿತ್ಯತೆಯನ್ನು ಹೆಚ್ಚಿಸಲು ಎಲ್ಲರು ಶ್ರಮಿಸೋಣ ಎಂದರು.

ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿಂತನೆ, ಸಂಶೋಧನೆ, ಬರಹಗಳು ಎಂದಿಗೂ ಶಿಕ್ಷಕರಿಗೆ ಆದರ್ಶವಾಗಿದೆ. ಮಕ್ಕಳಿಗೆ ಮೊದಲ ಗುರು ತಂದೆ-ತಾಯಿಯಾಗಿದ್ದು, ನಂತರ ಶಿಕ್ಷಕರೇ ಗುರು ಸ್ಥಾನವನ್ನು ಸಮರ್ಥವಾಗಿ ತುಂಬುತ್ತಾರೆ. ಶಿಕ್ಷಕರಿಗೆ ಅತ್ಯಂತ ಶೇಷ್ಠ ವೃತ್ತಿ, ಜವಾಬ್ದಾರಿ ಜೊತೆಗೆ ಸಮಾಜದಲ್ಲಿ ಗೌರವ ಹೆಚ್ಚಿದೆ. ಇಂಥ ಸತ್ಕಾರ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಸಿ.ಎನ್. ಮಲ್ಲಣ್ಣ ಅವರು ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಕೋರಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿ ಹಿರಿಯ ಶಿಕ್ಷಕರಾದ ಸಿ.ಎನ್. ಮಲ್ಲಣ್ಣ ಅವರು ಮಾತನಾಡಿ, ನಾನು ಶಿಕ್ಷಕನಾಗಿ ನನ್ನ ವೃತ್ತಿಯನ್ನು ಬಹಳ ಸಂತೋಷದಿಂದ ಪೊರೈಸಿದ್ದೇನೆ. ನಾನು ಪಾಠ ಮಾಡಿದ ಬಹಳಷ್ಟು ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಹುದ್ದೆಗಳಲ್ಲಿ ದ್ದಾರೆ. ಅವರೆಲ್ಲರು ಸಹ ಇಂದಿಗೂ ಸಹ ನನ್ನನ್ನು ಕಂಡರೆ ನಿಮ್ಮ ವಿದ್ಯಾರ್ಥಿ ಎಂದು ಪರಿಚಯ ಮಾಡಿಕೊಳ್ಳುತ್ತಾರೆ. ಇದೇ ನನಗೆ ಹೆಚ್ಚಿನ ಸಂತೋಷನ್ನು ಉಂಟು ಮಾಡುತ್ತದೆ. ತಾವೆಲ್ಲರು ಶಿಕ್ಷಕರ ದಿನದಂದು ಸನ್ಮಾನಿಸಿರುವುದು ಇನ್ನು ಹೆಚ್ಚಿನ ಸಂತಸವನ್ನು ಉಂಟು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಎ.ಎನ್. ಗಜೇಂದ್ರ, ತಾಲೂಕು ಅಧ್ಯಕ್ಷ ಹರವೆ ಎಸ್. ಮಂಜುನಾಥ್, ಜಿತೇಂದ್ರ ಇತರರು ಇದ್ದರು.

Leave a Reply

Your email address will not be published. Required fields are marked *