ಚಾಮರಾಜನಗರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ೨೦೨೩-೨೪ನೇ ಸಾಲಿಗೆ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿ ಪ್ರೌಢಶಾಲಾ ವಿಭಾಗದ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರಗುತ್ತಿಗೆಯಡಿಯಲ್ಲಿ ಬಿ.ಐ.ಇ.ಆರ್.ಟಿ ಗಳ ಸೇವೆ ಪಡೆಯಲು ತಾಲೂಕುವಾರು ಆಯ್ಕೆಗೆ ಅರ್ಜಿ ಆಹ್ವಾನಿಸಿದೆ.
ಚಾಮರಾಜನಗರ ೨, ಗುಂಡ್ಲುಪೇಟೆಯಲ್ಲಿ ೨, ಕೊಳ್ಳೇಗಾಲ ೨, ಹನೂರು ೨, ಯಳಂದೂರು ೨ ಸೇರಿ ಒಟ್ಟು ೧೦ ಹುದ್ದೆಗಳಿರುತ್ತವೆ.
ಸಮನ್ವಯ ಶಿಕ್ಷಣದಲ್ಲಿ ಬಿ.ಇಡಿ, ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಿಶೇಷ ಶಿಕ್ಷಣದಲ್ಲಿ ಬುದ್ಧಿಮಾಂದ್ಯ (ಐ.ಡಿ) ಮತ್ತು ಬಹುವಿಕಲಾಂಗತೆ(ಎಂ.ಡಿ) ಪದವಿ ಪಡೆದಿರಬೇಕು. ವಿಶೇಷ ಶಿಕ್ಷಕರು ಸಮನ್ವಯ ಶಿಕ್ಷಣದಲ್ಲಿ ಬಿ.ಇಡಿ ವಿದ್ಯಾರ್ಹತೆಯನ್ನು ಆರ್.ಸಿ.ಐ ನಿಂದ ಅಂಗೀಕೃತವಾದ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಬಿ.ಇಡಿ ಪದವಿ ಹೊಂದಿರಬೇಕು ಅಥವಾ ಬಿ.ಇಡಿ ನೊಂದಿಗೆ ಆರ್.ಸಿ.ಐ ನಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಬಿ.ಇಡಿ ನೊಂದಿಗೆ ಸರ್ಟಿಫಿಕೆಟ್/ಡಿಪ್ಲೋಮಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಿಶೇಷವಾಗಿ ವಿಶೇಷ ಶಿಕ್ಷಣದಲ್ಲಿ ಬಿ.ಇಡಿ ವಿದ್ಯಾರ್ಹತೆ ತತ್ಸಮಾನ ಹೊಂದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ೬ ತಿಂಗಳ ಬೋಧನ ಅನುಭವ ಇರಬೇಕು.
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಆಗಸ್ಟ್ ೮ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳ ಕಚೇರಿಗೆ (ರೂ.ನಂ. ೨೦೫) ಸಲ್ಲಿಸಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.