ಕಾಡು, ಪಕ್ಷಿ, ಹಾಗೂ ಪ್ರಾಣಿಗಳನ್ನು ರಕ್ಷಣೆ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ

ಚಾಮರಾಜನಗರ: ಪಟ್ಟಣದ ಜ್ಞಾಮೃತ ಅಕಾಡಮಿ ವಿದ್ಯಾರ್ಥಿಗಳಿಗೆ ಕಾಡು, ಪ್ರಾಣಿ, ಪಕ್ಷಿ ಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕಾಡು, ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಮಾಡಲು ಯುವಕರು ಹೆಚ್ಚು ಜಾಗೃತರಾಗುವಂತೆಯು ಮುಂದಿನ ಪೀಳಿಗೆಗೆ ನಿಮ್ಮಂಥ ವಿದ್ಯಾರ್ಥಿಗಳಿಂದ ಸಾಧ್ಯ ವಿದೆಯೆಂದು ತಿಳಿಸಿದರು.

” ಪ್ರಾಣಿಗಳ ಸಂರಕ್ಷಣೆ –ನಮ್ಮೆಲ್ಲರ ಹೊಣೆ “, ನಮ್ಮ ಕಾಡು -ನಮ್ಮ ಜೀವ “, ಸೇವ್ ಪಾರೆಸ್ಟ್ -ಸೇವ್ ಅನಿಮಲ್ಸ್ ” ಘೋಷಣೆಯನ್ನು ವಿದ್ಯಾರ್ಥಿಗಳಿಂದ ಹೇಳಿಸಲಾಯಿತು.

ವನ್ಯ ಜೀವಿಗಳ ಅಪರಾಧ, ಹಿಂಸೆ,ಯಾವುದೇ ವಿಚಾರಗಳಿದ್ದರೂ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕಾಡು ಪ್ರಾಣಿಗಳ ರಕ್ಷಿಸಲು ಸ್ಥಳೀಯ ರು ಕೈ ಜೋಡಿಸಿದಾಗ ಅರಣ್ಯ ಇಲಾಖೆ ಸಂರಕ್ಷಣೆ ಮಾಡಲು ಹೆಚ್ಚು ಸಾದ್ಯ. ನಮ್ಮ ಕಾಡನ್ನು ನಾವು ರಕ್ಷಿ ಸಬೇಕು ಅರಣ್ಯ ಇಲಾಖೆ ಮೇಲೆ ಹಾಕಿ ಸುಮ್ಮನಾಗದೇ ಅರಣ್ಯ ಇಲಾಖೆಯ ಬಗ್ಗೆ ಅಭಿಮಾನ ಅಧಿಕಾರಿ ಗಳ ಬಗ್ಗೆ ಗೌರವವಿರಿಸಿ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಯ ಭಾರತ ಸರ್ಕಾರ ದ ಪ್ರತಿನಿಧಿ ಸೆಂದಿಲ್ ರವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜೊತೆಯಲ್ಲಿ ರಾಜೇಶ್ ಮತ್ತು ಮಂಜುನಾಥ್ ಶಿಕ್ಷಕರು ಇದ್ದರು.

Leave a Reply

Your email address will not be published. Required fields are marked *