ಚಾಮರಾಜನಗರ: ಜಿಲ್ಲಾ ಪರಿಶಿಷ್ಟ ಪಂಗಡದ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನಗರದ ಜಿಲ್ಲಾ ಪರಿಶಿಷ್ಟ ಪಂಗಡದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮಹದೇವನಾಯಕ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಸಹಕಾರ ಸಂಘವು ೫೩೪ ಸದಸ್ಯರನ್ನು ಹೊಂದಿದ್ದು, ೫,೩೪ ಲಕ್ಷ ಷೇರು ನಿಧಿ ಸಂಗ್ರವಾಗಿದ್ದು, ೧,೫೦,೦೦೦ ಭದ್ರತಾ ರೇವಣಿಗಳನ್ನು ಇಡಲಾಗಿದ್ದು, ೪೬,೯೦೦ ರೂ. ನಿವ್ವಳ ಲಾಭವನ್ನು ಸಂಘವು ಗಳಿಸಿದೆ ಎಂದರು.
ಪ.ಪಂಗಡದ ಸಹಕಾರ ಸಂಘವು ಜಲ್ಲಾದ್ಯಂತ ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕವಾಗಿ ಸಾಲ ಸೌಲಭ್ಯ ನೀಡಿ ಸಹಕಾರ ತತ್ವದಡಿ ಸಂಘವು ಸರ್ವ ಸದಸ್ಯರು ಸಲಹೆ ಸಹಕಾರದಿಂದ ಯಶಸ್ವಿಯಾಗಿ ೯ವರ್ಷ ಪೂರ್ಣಗೂಳಿಸಿ ೧೦ನೇ ವರ್ಷವರ್ಷಕ್ಕೆ ದಾಪುಗಾಳಿಡುತ್ತಿರುವುದು ಸಂತಸ ತಂದಿದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದವರಿಗೂ ಸಂಘದಿಂದ ೬,೭೦೦೦೦ ರೂ.ಗಳ ಆರ್ತೀಕ ಸಾಲ ನೀಡಿ ಅವರ ಸ್ವಾವಲಂಬನೆ ಜೀವನಕ್ಕೆ ನೆರವಾಗಿದ್ದು, ಒಬ್ಬರೂ ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ ಎಂಬ ಸಹಕಾರ ತತ್ವದಡಿ ನಮ್ಮ ಸಂಘವು ಪ್ರಾಮಾಣಿಕವಾಗಿ ಸಂಘದ ಸದಸ್ಯರ ಸಲಹೆ, ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ನಮ್ಮ ಸಂಘದ ವತಿಯಿಂದ ಬೀದಿ ಬದಿ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪಾರಿಗಳು, ಸಣ್ಣ ಉದ್ಯಮ ನಡೆಸುವಂತಹವರುಗಳ ಆರ್ಥಿಕ ಬಲವರ್ಧನೆಗೋಸ್ಕರ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಸರಕಾರ ಯಶಶ್ವಿನಿ ಯೋಜನೆ ಜಾರಿಗೊಳಿಸಿರುವ ಪ್ರಯುಕ್ತ ನಮ್ಮ ಸಂಘದ ೪೦ ಮಂದಿ ಪಾಲಾನುಭಾವಿಗಳಿಗೆ ಗುರುತಿನ ಚೀಟಿ ನೀಡಿದ್ದು, ಯಶಸ್ವಿನಿ ಯೋಜನೆಯಡಿಯಲ್ಲಿ ಅನಾರೋಗ್ಯ ಪೀಡಿತರಿಗೆ ಶ್ರಸ್ತ್ರ ಚಿಕಿತ್ಸೆಗೆ ಸುಮಾರು ೫ ಲಕ್ಷದವರಗೆ ಉಚಿತವಾಗಿ ನೆರವು ನೀಡಿರುವುದು, ಸದಸ್ಯರು ಇದನ್ನು ಸದುಪಯೋಗ ಪಡೆದುಕೂಳ್ಳಬೇಕೆಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ರಾಘವೇಂದ್ರ, ವೆಂಕಟರಮಣನಾಯಕ, ಮಹದೇವನಾಯಕ, ಜಿ.ಬಿ.ರಾಜು, ದಿನೇಶ್, ಸಂಘದ ನಿದೇಶಕರು, ಸದಸ್ಯರಿದ್ದರು.