ನಿವೃತ್ತ ಉಪನ್ಯಾಸಕರಿಗೆ ಸನ್ಮಾನ

ಚಾಮರಾಜನಗರ: ನಿವೃತ್ತ ಹೊಂದಿದ ಉಪನ್ಯಾಸಕರಾದ ಹರವೆ ಎಲ್ . ಬಸವರಾಜು ಅವರಿಗೆ ಭಗತ್ ಸಿಂಗ್ ಯುವಸೇನೆ ಹಾಗೂ ಸ್ವಾಮಿ ವಿವೇಕಾ ನಂದರ ಯುವಕ ಸಂಘದ ವತಿಯಿಂದ ಹರವೆ ಗ್ರಾಮದ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಚಾಮರಾಜನಗರ ತಾಲೂಕಿನ ಹರವೆ ಗ್ರಾಮದವರಾದ ಇವರು ೨೯ ವ?ಗಳ ಕಾಲ ವಿವಿಧ ಸರಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದು, ನಿವೃತ್ತ ಹೊಂದಿದ್ದು, ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದು ಮತ್ತು ಸಂಗೀತ, ಕಲೆ, ಹಾರ್ಮೋನಿಯಂ ನುಡಿಸುತ್ತಾ ಬೇರೆಯವರಿಗೂ ಮಾರ್ಗ ದರ್ಶನ ನೀಡುತ್ತಿದ್ದು, ಇವರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕಾಂತರಾಜು ತಿಳಿಸಿದರು. ಮಣೀಶ್, ಶಿವಮಲ್ಲಪ್ಪ, ಶಿವನಂಜಪ್ಪ, ಮಂಜು, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *