ಮೈಸೂರು: ಜೆಎಸ್ಎಸ್ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಸಂಧಿವಾತ ದಿನಾಚರಣೆಯನ್ನು ಆಚರಿಸುವ ಮೂಲಕ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಾಯಿತು.
ವೈದ್ಯಕೀಯ ಅಧೀಕ್ಷಕರಾದ ಡಾ. ಸಿ.ಪಿ. ಮಧು ಮತ್ತು ಉಪಪ್ರಾಂಶುಪಾಲರಾದ ಡಾ. ಮಹಾಂತಪ್ಪ, ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೈದ್ಯಕೀಯ ಅಧೀಕ್ಷಕರಾದ ಡಾ.ಸಿ.ಪಿ.ಮಧು ಅವರು ವಿಶ್ವ ಸಂಧಿವಾತ ದಿನಾಚರಣೆಯ ಪ್ರಯುಕ್ತ ರಿಯಾಯಿತಿ ದರದ ವಿಶೇಷ ತಪಾಸಣೆ ಪ್ಯಾಕೇಜ್ ಬಿಡುಗಡೆ ಮಾಡಿ, ಸಂಧಿವಾತ ಎಂಬುದು ಎಲ್ಲಾ ವಯಸ್ಸಿನವರಿಗೂ ಬರಬಹುದು, ಹಿಂದೆ ರೋಗ ಪತ್ತೆಗೆ ಹೆಚ್ಚಿನ ಅನುಕೂಲವಿರಲಿಲ್ಲ ಮುಂದುವರೆದ ತಂತ್ರಜ್ಞಾನ ಮತ್ತು ಅವಿಷ್ಕಾರದಿಂದ ಸಂಧಿವಾತ ಕಾಯಿಲೆಗೆ ಉತ್ತಮ ಚಿಕಿತ್ಸೆ ಲಭ್ಯವಿದೆ, ಇದಕ್ಕೆ ಪ್ರಾರಂಭದಲ್ಲಿ ರೋಗ ಪತ್ತೆಮಾಡಿ ಸೂಕ್ತ ಚಿಕಿತ್ಸೆ ನೀಡುವುದರ ಮುಖಾಂತರ ಗುಣಪಡಿಸಬಹುದು ಎಂದು ತಿಳಿಸಿದರು.
ಉಪಪ್ರಾಂಶುಪಾಲರಾದ ಡಾ.ಮಂತಪ್ಪ ಎಂ, ಅವರು ಮಾತನಾಡಿ, ಸಂಧಿವಾತದಿಂದ ದೀರ್ಘಾವಧಿಯ ಕಾಯಿಲೆಗಳನ್ನು ತಡೆಗಟ್ಟಲು ಸಮಸ್ಯೆಗಳನ್ನು ಮೊದಲೇ ಗುರುತಿಸಿ ಅದನ್ನು ಗುಣಪಡಿಸಬಹುದು, ಇದು ಮನುಷ್ಯನ ದೇಹದ ಒಳಗಡೆ ಉಂಟಾಗುವ ಕಾಯಿಲೆಯಾಗಿದೆ ಇದಕ್ಕೆ ಮನುಷ್ಯನ ಆಹಾರ, ಆಚಾರ ಮತ್ತು ವಿಚಾರಗಳೆ ಕಾರಣ ದಿನನಿತ್ಯ ಜೀವನದಲ್ಲಿ ಉತ್ತಮ ಆಹಾರವನ್ನು ಸೇವಿಸಬೇಕು, ಒಳ್ಳೆಯ ಆಚಾರ ಮತ್ತು ವಿಚಾರಗಳನ್ನು ಅಳವಡಿಸಿಕೊಂಡರೆ ಸಂಧಿವಾತ ಕಾಯಿಲೆಯಿಂದ ದೂರವಿರಬಹುದು ಎಂದು ತಿಳಿಸಿದರು.
ಇದೇ ಸಂದÀರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ರಿಯಾಯಿತಿ ದರದ ವಿಶೇಷArthritis Package ಪ್ಯಾಕೇಜ್ ಬಿಡುಗಡೆ ಮಾಡಲಾಯಿತು, ಈ ಪ್ಯಾಕೇಜ್ Complete Hemogram, CRP, RBS, Creatinine, SGOT, SGPT, Rheumatoid Factor, TSH.ಗಳನ್ನು ಒಳಗೊಂಡಿದೆ ಈ ಪ್ಯಾಕೇಜ್ 12 ಅಕ್ಟೋಬರ್ 2023 ರಿಂದ 12 ನವೆಂಬರ್ 2023 ರವರೆಗೆ ಲಭ್ಯವಿದೆ ಸಂಧಿವಾತ ರೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು.
ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್, ಉಪ ನಿರ್ದೇಶಕರು, ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ, ಉಪ ನಿರ್ದೇಶಕರು, ಡಾ. ಪುರುಷೋತ್ತಮ್ ಶಾಸ್ತ್ರಿ, ಪ್ರಾಧ್ಯಾಪಕರು, ಕೀಲು ಮತ್ತು ಮೂಳೆ ವಿಭಾಗ, ಡಾ. ಸುಬ್ರಮಣಿಯನ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸಂಧಿವಾತ ವಿಭಾಗ, ಡಾ. ಮಹಾಬಲ್ಲೇಶ್ವರ ಸಹ ಪ್ರಾಧ್ಯಾಪಕರು, ಸಂಧಿವಾತ ವಿಭಾಗ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.