ವಿಳಂಬ ಮುಂಗಾರು ಆಧಾರಿತ ಪರ್ಯಾಯ ಬೆಳೆ ಯೋಜನೆ ಅಳವಡಿಕೆಗೆ ಕೃಷಿ ಇಲಾಖೆ ಸಲಹೆ

ಚಾಮರಾಜನಗರ, ಆಗಸ್ಟ್ ೦೯ (ಕರ್ನಾಟಕ ವಾರ್ತೆ):- ಚಾಮರಾಜನಗರ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಶೇ.೩೦ ರಷ್ಟು ಮಳೆ ಕೊರತೆಯಾಗಿದ್ದು, ಪ್ರಮುಖ ಮುಂಗಾರು ಬೆಳೆಗಳ ಬಿತ್ತನೆ ಕುಂಠಿತವಾಗಿದೆ. ಹೀಗಾಗಿ ಆಗಸ್ಟ್ ತಿಂಗಳಲ್ಲಿ ಮಳೆಯಾದರೆ ರೈತಬಾಂಧವರು ಪರ್ಯಾಯ ಬೆಳೆ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ಕೃಷಿ ಇಲಾಖೆ ಸಲಹೆ ಮಾಡಿದೆ.

ಆಗಸ್ಟ್ ಮೊದಲ ಮತ್ತು ಎರಡನೇ ವಾರದಲ್ಲಿ ಮಳೆಯಾದರೆ ರಾಗಿ ಬೆಳೆಯಲ್ಲಿ ಕೆ.ಎಂ.ಆರ್-೨೦೪, ಕೆ.ಎಂ.ಆರ್-೩೪೦, ಕೆ.ಎಂ.ಆರ್-೬೩೦, ಕೆ.ಎಂ.ಆರ್-೩೧೬, ಇಂಡಾಫ್-೯, ರಾಗಿ ಮತ್ತು ಅವರೆ (೪:೧), ರಾಗಿ ಮತ್ತು ಅಲಸಂದೆ (೪:೧) ತಳಿಗಳನ್ನು ಬಿತ್ತಬೇಕು. ಮುಸುಕಿನ ಜೋಳ ಬೆಳೆಯಲ್ಲಿ ಎಂ.ಎ.ಹೆಚ್ ೧೪-೫ ಮತ್ತು ಎಂ.ಎ.ಹೆಚ್ ೧೪-೧೩೮ ಮುಸುಕಿನಜೋಳ ಮತ್ತು ಅವರೆ (೨:೨) ತಳಿಗಳನ್ನು ಬಿತ್ತಬೇಕು. ನವಣೆ ಬೆಳೆಯಲ್ಲಿ ಜಿ.ಪಿ.ಯು.ಎಫ್-೩, ಪಿ.ಎಸ್-೪, ಎಸ್.ಐ.ಎ-೩೨೬, ನವಣೆ ಮತ್ತು ಹುರುಳಿ (೫:೧) ತಳಿಗಳನ್ನು ಬಿತ್ತಬೇಕು. ಅಲಸಂದೆ ಬೆಳೆಯಲ್ಲಿ ಕೆ.ಬಿ.ಸಿ-೧, ಕೆ.ಬಿ.ಸಿ-೨, ಐ.ಟಿ-೩೮೯೫೬-೧, ಕೆ.ಎಂ-೫, ಕೆ.ಬಿ.ಸಿ-೯ ತಳಿಗಳನ್ನು ಬಿತ್ತಬೇಕು. ಅವರೆ ಬೆಳೆಯಲ್ಲಿ ಹೆಚ್.ಎ-೩, ಹೆಚ್.ಎ-೪, ಹೆಚ್.ಎ-೫ ತಳಿಗಳನ್ನು ಬಿತ್ತಬೇಕು. ಹುರುಳಿ ಬೆಳೆಯಲ್ಲಿ ಕೆ.ಬಿ.ಹೆಚ್-೧, ಪಿ.ಹೆಚ್.ಜಿ-೯ ತಳಿಗಳನ್ನು ಬಿತ್ತಬೇಕು. ಸೂರ್ಯಕಾಂತಿ ಬೆಳೆಯಲ್ಲಿ ಕೆ.ಬಿ.ಎಸ್.ಹೆಚ್-೫೩, ಕೆ.ಬಿ.ಎಸ್.ಹೆಚ್-೭೮ ತಳಿಗಳನ್ನು ಬಿತ್ತಬಹುದಾಗಿದೆ. ಹುಚ್ಚೆಳ್ಳು ಕೆ.ಬಿ.ಎನ್-೧. ಕೆ.ಬಿ.ಎನ್-೨, ಎನ್.ಓ-೭೧ ತಳಿಗಳನ್ನು ಬಿತ್ತಬಹುದಾಗಿದೆ. ತಡವಾದ ಮಳೆಯ ಕಾರಣದಿಂದಾಗಿ ಆಗಸ್ಟ್ ಮೊದಲನೆ ವಾರ ಕಾಲುವೆಗಳಲ್ಲಿ ಸೀಮಿತ ನೀರಿನ ಬಿಡುಗಡೆಯಾದರೆ ಭತ್ತದ ಬೆಳೆಯಲ್ಲಿ ಆರ್.ಎನ್.ಆರ್-೧೫೦೪೮, ತೆಲ್ಲಹಂಸ, ರಾಶಿ, ಎಂ.ಟಿ.ಯು-೧೦೧೦ ತಳಿಗಳನ್ನು ಬಿತ್ತಬಹುದು. ಕಬ್ಬು ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಮುಸುಕಿನ ಜೋಳದ ಎಂ.ಎ.ಹೆಚ್ ೧೪-೫ ಮತ್ತು ಎಂ.ಎ.ಹೆಚ್ ೧೪-೧೩೮ ರಾಗಿ ಕೆ.ಎಂ.ಆರ್-೨೦೪, ಕೆ.ಎಂ.ಆರ್-೩೪೦, ಕೆ.ಎಂ.ಆರ್ -೬೩೦, ಕೆ.ಎಂ.ಆರ್-೩೧೬, ಇಂಡಾಫ್-೯ (ತಡವಾಗಿ ನಾಟಿ ಮಾಡಬಹುದಾಗಿದೆ).

ಆಗಸ್ಟ್ ಮೂರು ಮತ್ತು ನಾಲ್ಕನೇ ವಾರದಲ್ಲಿ ಮಳೆಯಾದರೆ ರಾಗಿ ಬೆಳೆಯಲ್ಲಿ ಜಿ.ಪಿ.ಯು-೨೮, ಎಂ.ಎಲ್-೩೬೫, ಜಿ.ಪಿ.ಯು-೬೬, ಜಿ.ಪಿ.ಯು-೪೮, ಜಿ.ಪಿ.ಯು-೪೫, ಜಿ.ಪಿ.ಯು-೨೬, ಇಂಡಾಫ್-೯, ಕೆ.ಎಂ.ಆರ್-೨೦೪, ಕೆ.ಎಂ.ಆರ್-೩೪೦, ಕೆ.ಎಂ.ಆರ್-೬೩೦, ಕೆ.ಎಂ.ಆರ್-೩೧೬, ರಾಗಿ ಮತ್ತು ಅವರೆ (೪:೧), ರಾಗಿ ಮತ್ತು ಅಲಸಂದೆ (೪:೧) ತಳಿಗಳನ್ನು ಬಿತ್ತಬೇಕು. ಮುಸಕಿನ ಜೋಳ ಬೆಳೆಯಲ್ಲಿ ಎಂ.ಎ.ಹೆಚ್ ೧೪-೫ ಮತ್ತು ಎಂ.ಎ.ಹೆಚ್ ೧೪-೧೩೮, ಮುಸುಕಿನ ಜೋಳ ಮತ್ತು ಅವರೆ (೨:೨) ತಳಿಗಳನ್ನು ಬಿತ್ತಬಹುದು. ನವಣೆ ಬೆಳೆಯಲ್ಲಿ ಜಿ.ಪಿ.ಯು.ಎಫ್-೩, ಪಿ.ಎಸ್-೪, ಎಸ್.ಐ.ಎ-೩೨೬, ನವಣೆ ಮತ್ತು ಹುರುಳಿ (೫:೧) ತಳಿಗಳನ್ನು ಬಿತ್ತಬೇಕು. ಅಲಸಂದೆ ಬೆಳೆಯಲ್ಲಿ ಕೆ.ಬಿ.ಸಿ-೧, ಕೆ.ಬಿ.ಸಿ-೨, ಐ.ಟಿ-೩೮೯೫೬-೧, ಕೆ.ಎಂ-೫, ಕೆ.ಬಿ.ಸಿ-೯ ತಳಿಗಳನ್ನು ಬಿತ್ತಬಹುದು. ಅವರೆ ಬೆಳೆಯಲ್ಲಿ ಹೆಚ್.ಎ-೩, ಹೆಚ್.ಎ-೪, ಹೆಚ್.ಎ-೫ ತಳಿಗಳನ್ನು ಬಿತ್ತಬೇಕು. ಹುರುಳಿ ಬೆಳೆಯಲ್ಲಿ ಕೆ.ಬಿ.ಹೆಚ್-೧, ಪಿ.ಹೆಚ್.ಜಿ-೯ ತಳಿಗಳನ್ನು ಬಿತ್ತಬಹುದು. ಸೂರ್ಯಕಾಂತಿ ಬೆಳೆಯಲ್ಲಿ ಕೆ.ಬಿ.ಎಸ್.ಹೆಚ್-೭೮, ಕೆ.ಬಿ.ಎಸ್.ಹೆಚ್-೫೩ ತಳಿಗಳನ್ನು ಬಿತ್ತಬೇಕು. ಹುಚ್ಚೆಳ್ಳು ಬೆಳೆಯಲ್ಲಿ ಕೆ.ಬಿ.ಎನ್-೧. ಕೆ.ಬಿ.ಎನ್-೨, ಎನ್.ಓ-೭೧ ಬಿತ್ತಬಹುದು.

ಮೇವಿನ ಬೆಳೆಗಳಾದ ಮೇವಿನ ಮುಸುಕಿನ ಜೋಳ, ಸಜ್ಜೆ, ಜೋಳ ಬಿತ್ತಬಹುದು. ತಡವಾದ ಮಳೆಯ ಕಾರಣದಿಂದಾಗಿ ಆಗಸ್ಟ್ ೩ನೇ ವಾರ ಕಾಲುವೆಗಳಲ್ಲಿ ಸೀಮಿತ ನೀರಿನ ಬಿಡುಗಡೆಯಾದರೆ ಭತ್ತದ ಬೆಳೆಯಲ್ಲಿ ಸಿ.ಟಿ.ಹೆಚ್-೧, ಸಿ.ಟಿ.ಹೆಚ್-೩, ಆರ್.ಎನ್‌ಆರ್-೧೫೦೪೮, ಕಬ್ಬು ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಮುಸುಕಿನ ಜೋಳದ ಎಂ.ಎ.ಹೆಚ್ ೧೪-೫ ಮತ್ತು ಎಂ.ಎ.ಹೆಚ್ ೧೪-೧೩೮ ಸೂರ್ಯಕಾಂತಿ ಕೆ.ಬಿ.ಎಸ್.ಹೆಚ್-೫೩, ಕೆ.ಬಿ.ಎಸ್.ಹೆಚ್-೭೮ ರಾಗಿ ಕೆ.ಎಂ.ಆರ್-೨೦೪, ಕೆ.ಎಂ.ಆರ್ -೩೪೦, ಕೆ.ಎಂ.ಆರ್ -೬೩೦, ಕೆ.ಎಂ.ಆರ್-೩೧೬, ಐ.ಎನ್.ಡಿ.ಎ.ಎಫ್-೯ (ತಡವಾಗಿ ನಾಟಿ ಮಾಡುವುದು).

ಪರ್ಯಾಯ ಬೆಳೆ ಯೋಜನೆಯಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳ ಕುರಿತು ಸಲಹೆ ಮಾಡಲಾಗಿದೆ. ಬಿತ್ತನೆಗೆ ಅಲ್ಪಾವಧಿ ತಳಿ/ಬೆಳೆಗಳನ್ನು ಆಯ್ಕೆ ಮಾಡುವುದು. ಮಣ್ಣಿನ ತೇವಾಂಶವನ್ನು ಕಾಪಾಡಲು ಆಳವಾದ ಉಳುಮೆ, ಇಳಿಜಾರಿಗೆ ಅಡ್ಡಲಾಗಿ ಪ್ರತಿ ೧೦-೧೨ ಮೀ. ಅಂತರದಲ್ಲಿ ಸಣ್ಣ ಬದುಗಳ ನಿರ್ಮಾಣ ಮಾಡಿ ಉಬ್ಬು ದಿಣ್ಣೆಗಳನ್ನು ಸಮ ಮಾಡಬೇಕು. ತದ ನಂತರ ಪ್ರತಿ ೩.೩-೪.೦ ಮೀ. ಅಂತರದಲ್ಲಿ ದೋಣಿ ಸಾಲಗಳನ್ನು ನಿರ್ಮಿಸಬೇಕು. ಮುಸುಕಿನ ಜೋಳ ಮತ್ತು ಸೂರ್ಯಕಾಂತಿಯನ್ನು ದೋಣಿ ಬೋದು ಸಾಲುಗಳಲ್ಲಿ ಬಿತ್ತಬೇಕು. ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮಾಡಬೇಕು. ಬಿತ್ತನೆ ಬೀಜಗಳನ್ನು ಹದ ಮಾಡುವುದು /ಗಡಿಸುಮಾಡುವುದು (ಪ್ರತಿ ಕೆಜಿ ರಾಗಿಯನ್ನು ೬೦೦ ಮಿ.ಲೀ ನೀರಿನಲ್ಲಿ ೧೮ ಗಂಟೆಗಳ ಕಾಲ ನೆನೆಸುವುದು ನಂತರ ೨೪ ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸುವುದು. ದ್ವಿದಳ ಬೆಳೆಗಳಾದರೆ ಕ್ಯಾಲ್ಸಿಯಂ ಕ್ಲೋರೈಡ್ ಶೇ. ೦.೨ ದ್ರಾವಣದಲ್ಲಿ ನೆನೆಸುವುದು.) ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡುವುದು. (ಏಕದಳ ಬೆಳೆಗಳಾದರೆ ಎಕರೆಗೆ ೨೦೦ ಗ್ರಾಂ ನಂತೆ ಅಜೋಸ್ಪಿರಿಲಂ/ಅಜಟೋಬ್ಯಾಕ್ಟರ್ ಮತ್ತು ಪಿ.ಎಸ್.ಬಿ ಇಂದ; ದ್ವಿದಳ ಬೆಳೆಗಳಾದರೆ ಎಕರೆಗೆ ೧೫೦-೨೦೦ ಗ್ರಾಂ ನಂತೆ ರೈಜೋಬಿಯಂ ಮತ್ತು ಪಿ.ಎಸ್.ಬಿ ಇಂದ ಬೀಜೋಪಚಾರ ಮಾಡುವುದು). ಮಳೆಯಾಗದಿದ್ದಾಗ ೮ ರಿಂದ ೧೦ ದಿನಗಳ ಮೊದಲೇ ಶೇ. ೧೫-೨೦ರ ಹೆಚ್ಚಿನ ರಾಗಿ ಬಿತ್ತನೆ ಬೀಜ ಉಪಯೋಗಿಸಿ ಒಣ ಬಿತ್ತನೆ ಮಾಡಬೇಕು.

ನೀರಾವರಿ ಸೌಲಭ್ಯವಿರುವವರು ರಾಗಿ ಸಸಿ ಮಡಿ ತಯಾರಿಸಿ ಮಳೆ ಬಂದ ತಕ್ಷಣ ಪೈರುಗಳನ್ನು ನಾಟಿ ಮಾಡಬೇಕು. ಸಮತೋಲಿನ ಪೋಷಕಾಂಶಗಳನ್ನು ನೀಡಬೇಕು. ಭತ್ತದ ಬೆಳೆಯಲ್ಲಿ ಶ್ರೀ ಪದ್ಧತಿ, ಅರೆ ನೀರಾವರಿ ಪದ್ಧತಿ ಹಾಗೂ ಡ್ರಂ ಸೀಡರ್ ನಿಂದ ಬಿತ್ತನೆ ಮಾಡಬೇಕು. ಸಸಿಗಳ ಎಲೆಗಳ ತುದಿಯನ್ನು ಕತ್ತರಿಸಿ ನಾಟಿ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಮಧೂಸೂಧನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *