ಶಿಸ್ತಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ : ಆರ್.ಎ.ಚೇತನ್ ರಾಮ್

  • ಬಸವಮಾರ್ಗ ಫೌಂಡೇಶನ್ ನಿಂದ ಉಚಿತ ವಸತಿ ನಿಲಯ ಉದ್ಘಾಟನೆ

ಮೈಸೂರು : ಶಿಸ್ತಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ ಎಂದು ವ್ಯಕ್ತಿತ್ವ, ಜೀವನ ಕೌಶಲ ತರಬೇತುದಾರ ಆರ್.ಎ.ಚೇತನ್ ರಾಮ್ ಹೇಳಿದರು.

ಬಸವಮಾರ್ಗ ಫೌಂಡೇಶನ್ ವತಿಯಿಂದ ಸರಸ್ವತಿ ಪುರಂನಲ್ಲಿ ನಿರ್ಮಾಣ ಮಾಡಿರುವ ಬಡ ವಿದ್ಯಾರ್ಥಿಗಳ ಉಚಿತ ವಸತಿ ನಿಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಾಸಂಗದ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಜೀವನಕ್ಕೆ ಒಂದು ನಿರ್ಧಿಷ್ಟ ಗುರಿ ಇರಬೇಕು. ಅದನ್ನು ಮುಟ್ಟಲು ನಿರಂತರವಾಗಿ ಪರಿಶ್ರಮ ಹಾಕಬೇಕು. ಓದು, ಜ್ಣಾನ ನಮ್ಮದಾಗಬೇಕಾದರೆ, ಉತ್ತಮ ಸ್ನೇಹಿತರೊಂದಿಗೆ ಬೆರೆಯಬೇಕು. ಕೇವಲ ಪಠ್ಯಕ್ಕೆ ಸೀಮಿತರಾಗದೆ, ವ್ಯಕ್ತಿತ್ವ ವಿಕಸನ ಮಾಡುವ ಪುಸ್ತಕಗಳನ್ನು ಹೆಚ್ಚೆಚ್ಚು ಓದಬೇಕು ಎಂದು ಸಲಹೆ ನೀಡಿದರು.

ಬಸವಮಾರ್ಗ ‌ಫೌಂಡೇಷನ್ ಅಧ್ಯಕ್ಷ ಎಸ್.ಬಸವರಾಜು ಮಾತನಾಡಿ, ಕುಡಿತಕ್ಕೆ‌ ದಾಸನಾಗಿದ್ದ ನನಗೆ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಮರು ಹುಟ್ಟು ನೀಡಿತು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಕಳೆದ ಐದು ವರ್ಷಗಳಿಂದ ವ್ಯಸನಿಗಳ ಸೇವೆ ಮಾಡಲಾಗುತ್ತಿದೆ. ಅದು ಇಷ್ಟಕ್ಕೆ ನಿಲ್ಲಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಬಡ ಮಕ್ಕಳಿಗೆ ವಸತಿ ನಿಲಯ ತೆರೆಯಲಾಗಿದೆ. ಈಗಾಗಲೇ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆಯಲಾಗಿದೆ. ಈ ಶಾಲೆಯ ಗ್ರಾಮಾಂತರ ಮಕ್ಕಳಿಗೆ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

5 ತರಗತಿಯಿಂದ 10ನೇ ತರಗತಿ ವರೆಗಿನ ಬಾಲಕರಿಗೆ ಈ ವಸತಿ ನಿಲಯವನ್ನು ತೆರೆಯಲಾಗಿದೆ. ಈ ಮಕ್ಕಳಿಗೆ ಪ್ರತಿ ವಿಷಯಕ್ಕೂ ಶಿಕ್ಷಕರನ್ನು ನೇಮಿಸಲಾಗಿದೆ. ಜತೆಗೆ ಕೌಶಲ ಕಲಿಗೆ ಒತ್ತು ನೀಡಲಾಗಿದೆ. ಸದ್ಯ ಕುಕ್ಕರಹಳ್ಳಿ ಸರ್ಕಾರಿ ಶಾಲೆಯ 21 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ವ್ಯಸನಕ್ಕೆ ದಾಸರಾಗಿದ್ದವರು ಹಾಗೂ ಬಡ ಮಕ್ಕಳನ್ನು ನಮ್ಮಲ್ಲಿ ದಾಖಲಿಸಬಹುದು. ಬಡ ಮಕ್ಕಳೂ ಕೂಡ ಶ್ರೀಮಂತರಾಗಬೇಕು ಎನ್ನುವುದು ನಮ್ಮ ಆಶಯ ಎಂದು ತಿಳಿಸಿದರು.
.
ಜಿಪಂ ಮಾಜಿ‌ ಸದಸ್ಯ ಎನ್.ಮಹದೇವ್, ಕರ್ನಾಟಕ 24 ಮನೆ ತೆಲಗು ಶೆಟ್ಟರ ಸಂಘದ ಉಪಾಧ್ಯಕ್ಷ ಅಪ್ಪಾಜಿ, ಸಹ ಕಾರ್ಯದರ್ಶಿ ನಾಗರಾಜ್ ಶೆಟ್ಟರು, ಖಜಾಂಚಿ ಶ್ರೀಧರ ಮೂರ್ತಿ, ಪ್ರೇರಣಾ ಸಂಸ್ಥೆಯ ನಿರ್ದೇಶಕ ನಿರಂಜನ್, ಅಕ್ಷರ ಫೌಂಡೇಶನ್ ಸಂಸ್ಥಾಪಕ

ಚಿತ್ರ : ಬಸವಮಾರ್ಗ ಫೌಂಡೇಶನ್ ವತಿಯಿಂದ ಸರಸ್ವತಿ ಪುರಂನಲ್ಲಿ ತೆರೆದಿರುವ ಸರ್ಕಾರಿ ಬಡ ವಿದ್ಯಾರ್ಥಿಗಳ ಉಚಿತ ವಸತಿ ನಿಲಯವನ್ನು ಶುಕ್ರವಾರ ಗಣ್ಯರು ಉದ್ಘಾಟಿಸಿದರು. ಆರ್.ಎ.ಚೇತನ್ ರಾಮ್, ಎಸ್.ಬಸವರಾಜು ಇತರರು ಇದ್ದಾರೆ.

Leave a Reply

Your email address will not be published. Required fields are marked *