ಚಾಮರಾಜನಗರ: ತಾಲೂಕಿನ ಅಮಚವಾಡಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಪ್ರಸಕ್ತ ವರ್ಷದಲ್ಲಿ ರೈತರಿಗೆ 3,38,37,000 ರೂ.ಗಳ ಸಾಲ ವಿತರಣೆ ಮಾಡಿದ್ದು, ಪ್ರಸಕ್ತ ವರ್ಷದಲ್ಲಿ ಸಂಘ 82 ಸಾವಿರ ನಿವ್ವಳ ಲಾಭ ಗಳಿಸಿದ್ದರು ಸಹ ಹಿಂದಿನ ವರ್ಷಗಳ ನಷ್ಟಕ್ಕೆ ಹೊಂದಾಣಿಕೆಯಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಂ. ನಾಗಸುಂದರ ತಿಳಿಸಿದರು.

ಗ್ರಾಮದ ಸಂಘದ ಕಚೇರಿ ಅವರಣದಲ್ಲಿ ನಡೆದ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷ ರೈತರಿಗೆ ಕೆಸಿಸಿ ಬೆಳೆ ಸಾಲ, ವಾಹನ ಸಾಲ, ಪಿಗ್ಮಿ ಸಾಲ, ಗೃಹ ಸಾಲ ಇತರೇ ಸಾಲವಾಗಿ 4.18 ಕೋಟಿ ಕೃಷಿ ಸಾಲವನ್ನು ನೀಡಲಾಗಿದೆ. ಸದಸ್ಯರಿಂದ 3.78 ಕೋಟಿ ರೂ. ಸಾಲ ವಸೂಲಾತಿಯಾಗಿದೆ. ಅದೇ ರೀತಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ರೈತರಿಗೆ 3.68 ಲಕ್ಷ ರೂ. ಸಾಲ ಪಡೆದು. ಶೂನ್ಯ ಬಡ್ಡಿ ದರದಲ್ಲಿ ವಾಪಸ್ 3.39 ಕೋಟಿ ರೂ. ಸಾಲ ಕಟ್ಟಿಲಾಗಿದೆ. ಇದರಲ್ಲಿ ಸರ್ಕಾರದÀ ಸಾಲ ಮನ್ನಾದಿಂದ 2.80 ಲಕ್ಷ ರೂ. ಬಾಕಿ ಬರಬೇಕಾಗಿದೆ ಎಂದು ತಿಳಿಸಿದರು.
ಸಂಘ ಸದಸ್ಯರು ಸರ್ಕಾರದ ಸಾಲ ಸೌಲಭ್ಯವನ್ನು ಪಡೆದುಕೊಂಡು ಶೂನ್ಯ ಬಡ್ಡಿ ದರದಲ್ಲಿ ಸಕಾಲದಲ್ಲಿ ಸಾಲ ಮರು ಪಾವತಿ ಮಾಡಬೇಕು ನಾಗಸುಂದರ ಮನವಿ ಮಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಎಚ್. ಜೋಷಿ ಅವರು ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು. ಹೆಚ್ಚುವರಿ ಸೇರಿ 500 ರೂ. ಕಟ್ಟಿ ಸಂಘದ ಸದಸ್ಯತ್ವವನ್ನು ನವೀಕರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎ.ಎಂ. ಮಣಿ, ನಿರ್ದೇಶಕರಾದ ಟಿ.ಬಿ. ಬಸವರಾಜು, ಎ.ಎನ್. ಸತೀಶ್, ಕತ್ತಿನಾಯಕ, ದೊಡ್ಡಶೆಟ್ಟಿ, ಇಂದ್ರೇಶ್, ಸೋಮಶೇಖರಮೂರ್ತಿ, ನಂಜುಂಡಸ್ವಾಮಿ, ಕೆಂಪರಾಜೇ ಅರಸು, ಮಲ್ಲಾಜಮ್ಮ, ನೌಕರರಾದ ನಾಗರಾಜು, ಎ.ಎಸ್. ನಾಗೇಶ್, ಎ.ಜಿ. ಕುಮಾರಸ್ವಾಮಿ, ಎಸ್. ರವಿಕುಮಾರ್ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.