ಹಳೇಪುರ ಡೇರಿ ಕಾಂಗ್ರೆಸ್ ತೆಕ್ಕೆಗೆ : ಅಧ್ಯಕ್ಷರಾಗಿ ಎಂ. ಮಾದೇಶ್ ಉಪಾಧ್ಯಕ್ಷರಾಗಿ ಶಿವಯ್ಯ ಅವಿರೋಧ ಆಯ್ಕೆ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಹಳೇಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿಗರಾದ ಎಂ. ಮಾದೇಶ್ ಹಾಗೂ ಶಿವಯ್ಯ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಅಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರಾದ ಎಂ. ಮಾದೇಶ್ ಅಧ್ಯಕ್ಷ ಸ್ಥಾನಕ್ಕೆ, ಶಿವಯ್ಯ ಉಪಾಧ್ಯಕ್ಷ ಸ್ಥಾನಕ್ಕೆ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದ ರಿಂದ ಚುನಾವಣಾಧಿಕಾರಿಯಾಗಿದ್ದ ಎಲ್. ಮಹದೇವಪ್ಪ ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ಸಂಘದ ಬಲವರ್ಧನೆಗೆ ಶ್ರಮ: ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ. ಮಾದೇಶ್ ಅಧಿಕಾರ ವಹಿಸಿಕೊಂಡು ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಒಮ್ಮತದಿಂದ ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಆಬಾರಿಯಾಗಿದ್ದೇನೆ. ಎಲ್ಲಾ ನಿರ್ದೇಶಕರ ಸಲಹೆ, ಸಹಕಾರವನ್ನು ಪಡೆದು ಸಂಘವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಜೊತೆಗೆ ಹಾಲು ಉತ್ಪಾದಕರ ಸದಸ್ಯರಿಗೆ ಒಕ್ಕೂಟ ಹಾಗೂ ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ಸವಲತ್ತುಗಳನ್ನು ಕಲ್ಪಿಸಲು ಬದ್ದರಾಗಿದ್ದೇವೆ. ಗುಣಮಟ್ಟದ ಹಾಲು ಶೇಖರಣೆ ಹೆಚ್ಚಿನ ಒತ್ತು ನೀಡೋಣ ಎಂದರು.

ಸಭೆಯಲ್ಲಿ ನೂತನ ನಿರ್ದೇಶಕರಾದ ಮಾಜಿ ಅಧ್ಯಕ್ಷರಾದ ಪಿ. ಬಸವಣ್ಣ, ಬಿ. ಸುಂದರ್, ಎಸ್. ಮಹದೇವೇಗೌಡ, ಎಂ. ನಾಗೇಶ್, ಮಹದೇವೇಗೌಡ, ಬಸವಣ್ಣ, ಸಿದ್ದರಾಜು, ಮಾದೇಗೌಡ( ಮಂಜಿ) ಭದ್ರಮ್ಮ, ಸಾವಿತ್ರಮ್ಮ, ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎಚ್.ಕೆ. ಮರಿಸ್ವಾಮಿ, ಹಾಲು ಪರೀಕ್ಷಕ ಬಿ. ಮಹೇಶ್, ರೇವಪ್ಪ, ಸಹಾಯಕ ಬಿ. ರಮೇಶ್ ಇದ್ದರು.

Leave a Reply

Your email address will not be published. Required fields are marked *