ಚಾಮರಾಜನಗರ : ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಶ್ರೀ ಮಹಾಪಾರ್ವತಿ ಮಾರಮ್ಮನ ಜಾತ್ರೆಯು ಫೆ.೨೪ ರಂದು ವಿಜೃಂಭಣೆಯಿAದ ನಡೆಯಲಿದೆ.
ಅಂದು ರಾತ್ರಿ ವೀರಮಕ್ಕಳ ಕುಣಿತ, ನಂದಿಧ್ವಜ, ತಮಟೆ, ಕೊಂಬು ವದನ, ಬಿರುದು ಬಾವಲಿಗಳ ಸತ್ತಿಗೆ, ಬಾಣ ಬಿರುಸು ಸೂರಪಾಣಿ ಮೆರವಣಿಗೆ, ತಾಂಜಾವೂರಿನ ರಾಜಮೇಳಂ ಪಾರ್ಟಿಯವರಿಂದ ಕಾವಡಿ ಆಟ, ವಿಜಯ ಶ್ಯಾಮಲ ಸುಧಾ ಅವರಿಂದ ಕರಗ ಮತ್ತು ನವಿಲು ಹಾಗೂ ಕೀಲುಕುದುರೆ ನೃತ್ಯ ಓಲಗ, ತೆರಕಣಾಂಬಿಯ ರಾಮಚಂದ್ರ ಮತ್ತು ಸಂಗಡಿಗರಿAದ ನಾದಸ್ವರ ಮೇಳ ನಡೆಯಲಿದೆ. ವಿವಿಧ ಸ್ವಯಂಚಾಲಿತ ದೀಪಾಲಂಕಾರ ಇರಲಿದೆ.
ಫೆ.೨೫ ರಂದು ಬೆಳಗ್ಗೆ ಬಸವ ವಾಹನ ಉತ್ಸವವು ಕಡುವಿನಕಟ್ಟೆ ಹುಂಡಿ ಶ್ರೀ ಮಹದೇಶ್ವರ ಕಂಸಾಳೆ ಕಲಾ ಸಂಘದವರಿAದ ಕಂಸಾಳೆ ಪದ, ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಉಡಿಗಾಲದ ಹಾಲು ಮತಸ್ಥರ ಸಂಘದವರಿAದ ಗೊರವರ ಕುಣಿತ, ಶ್ರೀ ವೀರಭದ್ರೇಶ್ವರ ವೀರಗಾಸೆ ಕುಣಿತ, ಬೀರೇದೇವರ ಕುಣಿತ, ನಗಾರಿ ಮತ್ತು ದೊಳ್ಳು ಕುಣಿತ, ಬ್ಯಾಂಡ್ ಸೆಟ್ ಹಾಗೂ ನಂಜನಗೂಡಿನ ಶ್ರೀ ಸಿದ್ದಪ್ಪಾಜಿ ಕಲಾ ಸಂಘದವರಿAದ ಗಾರುಡಿಗೊಂಬೆ ಸಮ್ಮುಖದಲ್ಲಿ ಸಾಗಲಿದೆ. ದೇವತಾ ಪೂಜಾ ಕಾರ್ಯಗಳು ನಡೆಯುತ್ತವೆ.
ಫೆ.೨೮ ರಂದು ರಾತ್ರಿ ೮ ಗಂಟೆಗೆ ಕೊತ್ತಲವಾಡಿ ಶ್ರೀ ಗುರುಮಲ್ಲೇಶ್ವರ ಸಂಘದವರಿ0ದ ಭಜನೆ, ಮಾ.೨ ರಂದು ಮರು ಜಾತ್ರೆಯ ಪ್ರಯುಕ್ತ ಪೂಜಾ ಕಾರ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.