- ಅಂಗಾಂಗ ದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಧಾತೃ ಕಾರ್ಯಕ್ರಮ
ಚಾಮರಾಜನಗರದ: ಅಂಗಾಂಗ ದಾನದ ಮೂಲಕ ಇತರರ ಜೀವನದಲ್ಲಿ ಬೆಳಕು ಮೂಡಿಸುವುದು ಒಂದು ಪುಣ್ಯದ ಕಾರ್ಯವಾಗಿದೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಹೇಳಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜೆಎಸ್ಎಸ್ ಕಾಲೇಜ್ ಆಫ್ ನರ್ಸಿಂಗ್,ಜೆಎಸ್ಎಸ್ ಶಿಕ್ಷಣಸಂಸ್ಥೆಗಳ ಸಮುಚ್ಚಯ,
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಅಂಗಾಂಗ ದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಧಾತೃ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗಾಂಗ ದಾನವು ಅತ್ಯಂತ ಶ್ರೇಷ್ಠವಾದ ಮಾನವೀಯ ಕಾರ್ಯವಾಗಿದ್ದು, ಮರಣಾನಂತರ ಒಬ್ಬ ದಾನಿಯು ಇತರ ಜನರಿಗೆ ಹೊಸ ಜೀವನವನ್ನು ನೀಡಬಲ್ಲದು. ಹೃದಯ, ಮೂತ್ರಪಿಂಡ, ಯಕೃತ್ತು, ಶ್ವಾಸಕೋಶದಂತಹ ಅಂಗಗಳನ್ನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮರುಜೀವ ಸಿಗುತ್ತದೆ. ಇದು ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಸಾವಿನ ನಂತರವೂ ಜೀವಂತವಾಗಿರುವ ಅದ್ಭುತ ಅವಕಾಶವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳು ಮರಣದ ನಂತರ ಇತರರಿಗೆ ದಾನ ಮಾಡುವ ಸಂಕಲ್ಪ, ನೊಂದಣಿ ಮಾಡಿಕೊಳ್ಳಬೇಕು. ಜೀವ ಉಳಿಸುವ ನಿಟ್ಟಿನಲ್ಲಿ ವೈದ್ಯರು ಪ್ರಯತ್ನ ಮಾಡುತ್ತಾರೆ. ಮರಣಾನಂತರ ನಮ್ಮ ದೇಹ ಸಾರ್ಥಕವಾಗಬೇಕಾಗಿದರೆ ನಾವು ಅರೋಗ್ಯವಾಗಿರಬೇಕು. ಬದುಕಿರುವಾಗ ಚೆನ್ನಾಗಿ ಬದುಕಬೇಕಿರಬೇಕು ಎಂದರು.
ಮದ್ಯ, ಧೂಮಪಾನ, ಮಾದಕವಸ್ತುಗಳಿಂದ ದೂರವಿರಬೇಕು. ಮೊಬೈಲ್ ಬಳಕೆಯಿಂದಲ್ಲೂ ದೂರ ವಿದ್ದು ನಶೆಮುಕ್ತ ಚಾಮರಾಜನಗರ, ಭಾರತಕ್ಕಾಗಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮದ ಜೆಎಸ್ಎಸ್ ಕಾಲೇಜು ಆಫ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಜಿ.ವಿನಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಅಂಕಪ್ಪ, ಜೆಎಸ್ಎಸ್ ಆಸ್ಪತ್ರೆ ವ್ಯದ್ಯಕೀಯ ಅಧೀಕ್ಷಕ ಡಾ.ನವೀನ್, ಡಾ.ನಯನಶಾಬದಿ,
ವಿದ್ಯಾರ್ಥಿಗಳು ಭಾಗವಹಿಸಿದ್ದರು.