ಚಾಮರಾಜನಗರ: ರಾಮಸಮುದ್ರ ಬಡಾವಣೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ನಿವಾಸಿಗಳಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಮಸಮುದ್ರ ಬಡಾವಣೆಯ 5 ವಾರ್ಡ್ಗಳಲ್ಲೂ ಐದಾರು ತಿಂಗಳಿನಿಂದಲ್ಲೂ ಕುಡಿಯುವ ನೀರು ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಚಂದಕವಾಡಿ ಜಾತ್ರೆವಿದ್ದು ಕುಡಿಯುವ ನೀರಿನ ತತ್ತರಿಸಿಹೋಗಿದ್ದಾರೆ
ಬಡಾವಣೆಯ ವಾರ್ಡ್ ಗಳಿಗೆ ಕುಡಿಯುವ ನೀರು,
ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಪ್ರತಿಭಟನೆ ನಡೆಸಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರಿಗಾಗಿ ನಿವಾಸಿಗಳು ಆಗಾಧವಾದ ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಬೋರ್ವೆಲ್ ದುರಸ್ಥಿ ಪಡಿಸಿಲ್ಲ. ನಗರಸಭೆ ಬಹಳ ದಿವ್ಯನಿರ್ಲಕ್ಷತೆ ವಹಿಸಿದೆ.
ಬಡಾವಣೆಯ ಮುಖ್ಯರಸ್ತೆಯಾದ ಹಳ್ಳದ ಬೀದಿಯ ರಸ್ತೆಯು ಸಮಸ್ಯೆಯಿಂದ ಕೂಡಿದ್ದು ಜನರು ತಿರುಗಾಡಲು ದಿನನಿತ್ಯ ತೊಂದರೆಯಾಗುತ್ತಿದೆ. ರಾಮಸಮುದ್ರದ ಆಯ್ದ ಬೀದಿಗಳಿಗೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ನಗರೋತ್ತಾನ ಯೋಜನೆಯಡಿಯಲ್ಲಿ ಹಣ ಬಿಡುಗಡೆಯಾಗಿ ಟೆಂಡರ್ ಆಗಿರುತ್ತದೆ. ಆದರೆ ಗುತ್ತಿಗೆದಾರರು ರಸ್ತೆಯನ್ನು ನಿರ್ಮಾಣ ಮಾಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ರಸ್ತೆಯ ಕಾಮಗಾರಿಯನ್ನು ಬೇಗ ಮುಗಿಸಿಕೊಡಿ ಎಂದು ಹಲವು ಬಾರಿ ಮನವಿ ಮಾಡಿದರು. ಯಾವುದೇ ಪ್ರಯೋಜನ ವಾಗಿಲ್ಲ ಎಂದು ದೂರಿದರು.
ನಗರಸಭೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಮುಗಿಸಿರುವುದಿಲ್ಲ. ಹಾಗೂ ರಾಮಸಮುದ್ರದ ಪೌರಕಾರ್ಮಿಕರ ಕಾಲೋನಿ ಹತ್ತಿರ ಒಳಚರಂಡಿಯು ಬ್ಲಾಕ್ ಆಗಿ ಒಳಚರಂಡಿಯ ನೀರು ರಸ್ತೆಯ ಮೇಲೆ ಬಂದು ಅವಸ್ಥೆಯಿಂದ ಕೂಡಿದ್ದು ಮಲೀನವಾದ ನೀರಿನಿಂದ ಅಲ್ಲಿನ ನಿವಾಸಿಗಳು ವಾಸಿಸಲು ತುಂಬಾ ತೊಂದರೆಯಾಗಿರುತ್ತದೆ. ಇದರ ಬಗ್ಗೆ ಕೂಡ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದ್ದರು ಕೂಡ ಸಮಸ್ಯೆಯನ್ನು ಇನ್ನೂ ಬಗೆಹರಿಸಿರುವುದಿಲ್ಲ. ಹಾಗೂ ರಾಮಸಮುದ್ರದ ಬಡಾವಣೆಯ ದುರ್ಗಿಗುಡಿ ಬೀದಿ, ಹಳ್ಳದಬೀದಿ, ಕುರುಬರ ಬೀದಿ, ಆದಿಜಾಂಬವರ ಬೀದಿ, ನಾಯಕರ ಬೀದಿ ಕೋಟೆಬೀದಿ, ಅಂಬೇಡ್ಕರ್ ಬಡಾವಣೆ, ಚಿಕ್ಕಹೊಸ ಬಡಾವಣೆ ಬೀದಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಅಲ್ಲಿನ ಬೋರ್ಗಳು ನೀರಿಲ್ಲದೆ ಬತ್ತಿ ಹೋಗಿರುತ್ತದೆ. ಬೋರ್ವೆಲ್ಗಳನ್ನು ರೀಬೋರ್ ಮಾಡಬೇಕೆಂದು ಹಲವಾರು ಬಾರಿಮನವಿ ಮಾಡಿದರು ಸಹ ರೀಬೋರ್ ಮಾಡಿರುವುದಿಲ್ಲ. ಹಾಗೂ ಹಲವು ಬೀದಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡದೇ ಅವ್ಯವಸ್ಥೆಯಿಂದ ಕೂಡಿರುತ್ತದೆ. ಬಡಾವಣೆಯ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ
ರಾಮಸಮುದ್ರ ಶಿವು, ಆರ್ ವಿ ಮಹದೇವಸ್ವಾಮಿ,
ಮಾಸ್ಟರ್ ಲಿಂಗರಾಜು, ನಾಗ ಬಸವಣ್ಣ, ಆರ್ ಎಂ ವಿಜಯಕುಮಾರ್, ನವೀನ್ ಇತರರು ಹಾಜರಿದ್ದರು.