ಸಾಲಿಗ್ರಾಮದ ಶ್ರೀ ಭೈರವೇಶ್ವರ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ಶ್ರೀ ಭೈರವೇಶ್ವರ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಆವರಣದಲ್ಲಿ ವಿವಿಧ ಮಾದರಿಯ ಸಸಿಗಳನ್ನು ನೆಡುವ ಮೂಲಕ ಆಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಎಸ್.ಕೆ.ರಮೇಶ್, ಕಾರ್ಯದರ್ಶಿ ಸಿ.ಪಿ.ತ್ರಿವೇಣಿ, ಮುಖ್ಯ ಶಿಕ್ಷಕಿ ಯಶಸ್ವಿನಿ, ಸಂಯೋಜಕಿ ಅರ್ಪಿತ ಸೇನ್, ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್, ಸಹಶಿಕ್ಷಕರುಗಳಾದ ಮಂಜುನಾಥ್, ರೇಖಾ, ಹೀನಾ ಕೌಸರ್, ರಕ್ಷಿತ, ಪ್ರಜ್ವಲ್, ಅಶ್ವಿನಿ, ಅಫ್ರಿನ್ ತಾಜ್, ಹನೀಫ, ಪ್ರೀತಿ, ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *