ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಯುವಕರಿಗೆ ಪ್ರೋತ್ಸಾಹ ನೀಡಿ

ಕಾಣೆಯಾಗಿದ್ದಾಳೆ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಮಂಜುನಾಥ್ ಪ್ರಸನ್ನ
ಯಳಂದೂರು : ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳು ಒಳಗೊಂಡು ವಿನೂತನ ಚಲನಚಿತ್ರ, ಟೈಟಲ್ ಹಾಗೂ ಕಥೆಯ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡುತ್ತಿರುವರ ಯುವಕರ ತಂಡವನ್ನು ಪ್ರೋತ್ಸಾಹಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಹಾಗೂ ಸಾಹಿತಿ ಮಂಜುನಾಥ್ ಪ್ರಸನ್ನ ( ಮಂಜು ಕೋಡಿ ಉಗನೆ) ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಣಿಯಾಗಿದ್ದಾಳೆ ಚಿತ್ರದ ತಂಡದವರು ಬುಧವಾರ ಹಮ್ಮಿಕೊಂಡಿದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಚಲನಚಿತ್ರ ರಂಗಕ್ಕೆ ಯುವ ಸಮೂಹ ಹೆಚ್ಚಾಗಿ ಆಗಮಿಸಿ ವಿನೂತ ಕಥೆ, ಗೀತೆ, ಸಾಹಿತ್ಯಗಳನ್ನು ರಚನೆ ಮಾಡಿ ಬೆಳೆಸುವುರ ಜತೆಗೆ ಕನ್ನಡ ಭಾಷೆ, ಪ್ರೇಮ ಸೇರಿದಂತೆ ಹೆಚ್ಚಿನ ಆದ್ಯತೆ ನೀಡುವ ಕೆಲಸವಾಗಬೇಕು, ಇದರಿಂದ ಕನ್ನಡ ಚಲನಚಿತ್ರವು ಇನ್ನೂ ಎತ್ತರಕ್ಕೆ ಬೆಳೆವಣಿಗೆಗೆ ಸಹಕಾರಿಯಾಗಲಿದ್ದು, ಜತೆಗೆ ಈ ಚಿತ್ರ ತಾರಗಣದಲ್ಲಿ ಗಿರಿಜಾ ಲೋಕೇಶ್, ಬಿರಾದರ್, ಚಾಚಾ ಬಿರಿಯಾನಿ, ಬಯರಾಂ ಸೇರಿದಂತೆ ಹಿರಿಯ ಕಲಾವಿದರ ಈ ಚಿತ್ರದಲ್ಲಿ ಅಭಿನಯಿಸಿದ್ದು. ಚಿತ್ರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ನಿರ್ದೇಶಕ ಆರ್.ಕೆ.ರಾಬು ಕಾರ್ತಿಕ್ ಮಾತನಾಡಿ, ಚಾಮರಾಜನಗರ ಜಿಲ್ಲೆಯು ಕಲೆಗಳ ತವರೂರು ಈ ಜಿಲ್ಲೆಯಲ್ಲಿ ಡಾ.ರಾಜ್‌ಕುಮಾರ್, ಅವಿನಾಶ್, ಸೇರಿದಂತೆ ಅನೇಕ ಚಲನಚಿತ್ರ ನಟರು ಹಾಗೂ ಸಾಹಿತಿಗಳು ಜಾನಪದ ಗೀತೆ ಗಾಯನಗಳ ಮೂಲಕ ಹೆಚ್ಚು ಪ್ರಚಾರಗೊಳ್ಳುತ್ತಾರೆ ಇವರನ್ನು ಜನತೆ ಪ್ರೋತ್ಸಾಹಿಸುವಲ್ಲಿ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಯುವ ಪ್ರತಿಭೆಗಳ ಕನ್ನಡ ಚಲನಚಿತ್ರದ ಬೆಳವಣಿಗೆಗೆ ಬೆಂಬಲಿಸುವ ಮೂಲಕ ಕನ್ನಡ ಚಿತ್ರಗಳನ್ನು ಚಿತ್ರ ಮಂದಿರದಲ್ಲಿ ನೋಡಿ ಬೆಳೆಸಬೇಕು ಎಂದರು. ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರತಂಡಕ್ಕೆ ಎಲ್ಲಾ ಕನ್ನಡ ಪ್ರೇಕ್ಷಕರು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ವಿನಯ್ ಕುಮಾರ್ , ನಟ ಕೀರ್ತಿಭಟ್, ಪ್ರತಿಧ್ವನಿ ಕಲಾ ವೇದಿಕೆ ಅಧ್ಯಕ್ಷ ಎಸ್.ಜೈಗುರು, ವಜ್ರಮುನಿ, ವಿಜಯ್,ಹರಿಕೃಷ್ಣ, ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *