ಚಾಮುಲ್‌ನಲ್ಲಿ 6 ಲಕ್ಷ ಲೀಟರ್ ಹಾಲು ಶೇಖರಣೆ ಸಾಮರ್ಥ್ಯ ಘಟಕವಿದೆ : ಎಚ್.ಎಸ್. ಬಸವರಾಜು

ಚಾಮರಾಜನಗರ: ಕುದೇರಿನಲ್ಲಿರುವ ಜಿಲ್ಲಾ ಹಾಲು ಒಕ್ಕೂಟವು ೬ ಲಕ್ಷ ಲೀಟರ್ ಶೇಖರಣೆ ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ತಕ್ಕಂತೆ ಜಿಲ್ಲೆಯ ರೈತರು ಹೆಚ್ಚು ಹಾಲು ಪೊರೈಕೆ ಮಾಡುವ ಮೂಲಕ ಹೈನುಗಾರಿಕೆ ಕ್ರಾಂತಿ ಮಾಡಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.

ತಾಲೂಕು ನಂಜೇದೇವನಪುರ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು, ನಂಜೇದೇವನಪುರ ಡೇರಿಯು ೯೦ ಲಕ್ಷ ರೂ. ಗಳಿಗೂ ಹೆಚ್ಚಿನ ಹಾಲು ಖರೀದಿಸಿ, ೩.೩೩ ಲಕ್ಷ ರೂ.ಗಳ ನಿವ್ವಳ ಪಡೆದುಕೊಂಡಿದೆ. ಇದರಲ್ಲಿ ಬೋನಸ್ ಆಗಿ ಉತ್ಪಾದಕರಿಗೆ ೧.೫೪ ಲಕ್ಷ ರೂ. ನೀಡಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಡೇರಿಗಳು ಗುಣಮಟ್ಟದ ಹಾಲು ಸರಬರಾಜು ಮಾಡಿದ ಪರಿಣಾಮ ಒಕ್ಕೂಟ ಅಭಿವೃದ್ದಿ ಹೊಂದಲು ಸಾಧ್ಯವಾಗಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ದಿಯಲ್ಲಿ ಹೈನು ಕ್ರಾಂತಿಯು ಸಹ ಮುಂಚೂಣಿಯಲ್ಲಿರುತ್ತದೆ ಎಂದರು.

ಕುದೇರಿನಲ್ಲಿರುವ ಘಟಕದಲ್ಲಿ ೬ ಲಕ್ಷ ಲೀಟರ್ ಹಾಲು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಈಗ ೨.೬೦ ಲಕ್ಷ ರೂ. ಹಾಲು ಪ್ರತಿ ದಿನ ಬರುತ್ತಿದೆ. ಇದು ಇನ್ನು ಸಹ ಹೆಚ್ಚು ಬರಬೇಕು. ರೈತರು ಹೆಚ್ಚಿನ ರಾಸುಗಳನ್ನು ಹೊಂದಿ ಡೇರಿಗೆ ಹಾಲು ಹಾಕುವ ಮೂಲಕ ಅರ್ಥಿಕ ಅಭಿವೃದ್ದಿಯನ್ನು ಸಾಧಿಸಬೇಕು. ಕುದೇರಿನಲ್ಲಿರುವ ಘಟಕದಲ್ಲಿ ಟ್ರಾಟ್ರಾ ಪ್ಯಾಕೇಟ್ ಯೂನಿಟ್, ನಂದಿನಿ ಸಿಹಿ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ನೂರಾರು ಮಂದಿ ದುಡಿಯುತ್ತಿದ್ದಾರೆ ಎಂದು ಬಸವರಾಜು ತಿಳಿಸಿದರು.

ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಸಹಕಾರ ಸಂಘಗಳ ಅಭಿವೃದ್ದಿಯಲ್ಲಿ ನೌಕರರು ಹಾಗೂ ಆಡಳಿತ ಮಂಡಳಿಯ ಪಾತ್ರ ಬಹಳಷ್ಟಿದೆ. ನಂಜೇದೇವನಪುರ ಡೇರಿ ಗುಣಮಟ್ಟದ ಹಾಲು ನೀಡಿ, ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ. ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ, ನೌಕರರು ಅಭಿನಂದನಾರ್ಹರು. ಈಗಾಗಲೇ ಒಕ್ಕೂಟ ಮತ್ತು ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ನೀಡಲಾಗಿದೆ. ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷ ಎನ್.ಎಸ್. ಶ್ರೀಕಂಠಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರು ಗುಣಮಟ್ಟದ ಹಾಲು ನೀಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು. ೧.೫೪ ಲಕ್ಷ ರೂ. ಬೋನಸ್ ಅನ್ನು ಷೇರುದಾರ ಸದಸ್ಯರಿಗೆ ನೀಡಲಾಗುತ್ತದೆ ಎಂದರು.

ಸಂಘ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಬಿ. ಮಹದೇವಕುಮಾರ್ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು. ಸಂಘಕ್ಕೆ ಹೆಚ್ಚಿನ ಹಾಲು ಸರಬರಾಜು ಮಾಡಿದ ಮೂವರಿಗೆ ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನವನ್ನು ನೀಡಲಾಯಿತು.

ಸಭೆಯ ಸಾನಿಧ್ಯವನ್ನು ಶ್ರೀ ರಾಜೇಂದ್ರಸ್ವಾಮೀಜಿ ವಹಿಸಿದ್ದರು.ಹಿರಿಯ ಮುಖಂಡರಾದ ಪಿ. ರಾಜಣ್ಣ, ಗ್ರಾ.ಪಂ. ಅಧ್ಯಕ್ಷ ಪಿ. ಶೇಖರಪ್ಪ, ನೌಕರರ ಸಂಘದ ಅಧ್ಯಕ್ಷ ಪಿ. ಶಾಂತು, ಚಾಮುಲ್ ವಿಸ್ತರಾಧಿಕಾರಿ ನಾಗೇಶ್, ಸಂಘದ ಉಪಾಧ್ಯಕ್ಷ ನೀಲಕಂಠಪ್ಪ, ನಿರ್ದೇಶಕರಾದ ವೀರೂಪಾಕ್ಷ, ಗುರುಮಲ್ಲಪ್ಪ, ಮಾದಪ್ಪ, ಮಹದೇವಪ್ಪ, ನಾಗರಾಜು, ಚಿಕ್ಕಮಾದೇಗೌಡ, ಮಹದೇವೇಗೌಡ, ಶಿವಮ್ಮ, ಗುರುತಾಯಮ್ಮ, ಹಾಲು ಪರೀಕ್ಷಕ ಮಹದೇವಪ್ಪ, ಸಹಾಯಕ ಮಾದಪ್ಪ, ಸಂಘದ ಸರ್ವ ಸದಸ್ಯರು ಇದ್ದರು.

Leave a Reply

Your email address will not be published. Required fields are marked *