ಪ್ರಧಾನಿ ಮೋದಿ ಹುಟ್ಟು ಹಬ್ಬ : ನೂರಕ್ಕೂ ಹೆಚ್ಚು ವೃದ್ದರಿಗೆ ಸನ್ಮಾನ

ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ಪ್ರಧಾನಿ : ಎಸ್. ಮಹದೇವಯ್ಯ ಬಣ್ಣನೆ
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವೇ ಭಾರತದತ್ತ ಮುಖ ಮಾಡುವಂತಹ ಕಾರ್ಯಕ್ರಮಗಳನ್ನು ನೀಡುವ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಉನ್ನತ ಸ್ಥಾನಕ್ಕೇರಿಸಿ, ಬಲಿಷ್ಟ ಭಾರತದ ಜೊತೆಗೆ ವಿಶ್ವ ಗುರುವನ್ನಾಗಿಸಿದ್ದಾರೆ ಎಂದು ಕಾಪೋಸ್ಟ್ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ತಿಳಿಸಿದರು.

ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಅವರ ಹುಟ್ಟು ಹಬ್ಬದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ 100ಕ್ಕು ಹೆಚ್ಚು ಹಿರಿಯ ನಾಗರೀಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಧನಿವರಿಯದೇ ಕೆಲಸ ಮಾಡುವಂತಹ ವ್ಯಕ್ತಿತ್ವವುಳ್ಳವರು. ದಿನದ 4 ಗಂಟೆ ಮಾತ್ರ ನಿದ್ರೆ ಮಾಡಿ, ಇನ್ನುಳಿದ ಅವಧಿಯಲ್ಲಿ ದೇಶದ ಅಭಿವೃದ್ದಿಗಾಗಿ ದುಡಿಯುತ್ತಿದ್ದಾರೆ. ಅವರ 73ನೇ ಹುಟ್ಟುಹಬ್ಬವನ್ನು ಇಡೀ ದೇಶದ್ಯಂತ ಸೇವಾ ಕಾರ್ಯಗಳ ಮೂಲಕ ಆಚರಣೆ ಮಾಡಿ, ಸೆ. 17 ರಿಂದ ಆರಂಭಿಸಿ, ಅ. 2 ರವರೆಗೆ ಗಾಂಧಿ ಜಯಂತಿ ಯವರಿಗೆ ದಿನ ನಿತ್ಯ ಸೇವಾ ಕಾರ್ಯಕ್ರಮಗಳನ್ನು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

ದೇಶದ ಸಂಕಷ್ಟದಲ್ಲಿದ್ದಾಗ ಕೋವಿಡ್ ಸಂದರ್ಭದಲ್ಲಿ ಅವರು ತೆಗೆದುಕೊಂಡು ದಿಟ್ಟ ನಿರ್ಧಾರಗಳು ವಿಶ್ವವೇ ಮೆಚ್ಚುವಂತಾಗಿತ್ತು.ಕೋವಿಡ್ ಲಸಿಕೆಯನ್ನು ಉಚಿತವಾಗಿ ದೇಶಧ ಎಲ್ಲ ಜನರಿಗೂ ಹಾಕುವ ಮೂಲಕ ಕೋವಿಡ್ ಮುಕ್ತ ಭಾರತ ಮಾಡಲು ಶ್ರಮಿಸಿದರು. ಸ್ವಧೇಶಿಯವಾಗಿ ಲಸಿಕೆ ಉತ್ಪಾದನೆ ನಮ್ಮ ದೇಶ ಅಲ್ಲದೇ ನೆರೆಹೊರೆಯ ರಾಷ್ಟ್ರಗಳಿಗೆ ಲಸಿಕೆಯನ್ನು ನೀಡಿ, ವಿಶ್ವ ಮಟ್ಟದಲ್ಲಿ ಭಾರತವನ್ನು ಮೆಚ್ಚುವಂತೆ ಮಾಡಿದರು. ಅವರ ಹುಟ್ಟುಹಬ್ಬವನ್ನು ಅಡಂಬರದಿಂದ ಆಚರಣೆ ಮಾಡದೇ ದೇಶದ ಜನ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ಕೊಟ್ಟ ಏಕೈಕ ಪ್ರಧಾನಿ ಎಂದು ಎಸ್. ಮಹದೇವಯ್ಯ ಬಣ್ಣಿಸಿದರು.

ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗುಣರಾಜು , ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವವೇ ಮೆಚ್ಚಿದ ಜನನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಹಾದಿಯಲ್ಲಿ ಎಲ್ಲರು ಸಾಗೋಣ. ಅವರು ಜಾರಿ ಮಾಡಿರುವ 350ಕ್ಕು ಹೆಚ್ಚು ಯೋಜನೆಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಜೊತೆಗೆ ಪ್ರತಿಯೊಬ್ಬರು ಅದರ ಫಲಾನುಭವಿಗಳಾಗುವಂತೆ ನೋಡಿಕೊಳ್ಳುವ ಜವಬ್ದಾರಿ ನಮ್ಮದಾಗಿದೆ ಎಂದರು.

ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಪ್ರಧಾನಿ ಮೋದಿ ಅವರ ಒಂಭತ್ತುವರೆ ವರ್ಷಗಳ ಭ್ರಷ್ಟಾಚಾರ ರಹಿತ ಹಾಗೂ ಅಭಿವೃದ್ದಿ ಪರ ಆಡಳಿತವು ದೇಶವೇ ಮೆಚ್ಚುವಂತಾಗಿದೆ. ದೇಶದ ಜನರ ಆರ್ಥಿಕ ಮಟ್ಟದವನ್ನು ಸುಧಾರಿಸುವ ಜೊತೆಗೆ ಉಚಿತವಾಗಿ ಹೆಣ್ಣು ಮಕ್ಕಳ ಸುರಕ್ಷತಾ ಯೋಜನೆ, ಕಿಸಾನ್ ಸನ್ಮಾನ್, ಉಜ್ವಲ ಗ್ಯಾಸ್ ಯೋಜನೆ, ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ನೀಡಿದರು. ಅವರ ಕಲ್ಯಾಣ ಕಾರ್ಯಕ್ರಮಗಳು ದೇಶದ ಜನರು ಮತ್ತೇ ಮೋದಿ ಅವರನ್ನೇ ಪ್ರಧಾನಿ ಮಾಡಲು ಮುಂದಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಕುಮುದಾ ಕೇಶವಮೂರ್ತಿ, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಮುಖಂಡರಾದ ನಲ್ಲೂರು ಪರಮೇಶ್, ಆಲೂರು ಬಾಬು, ಚಿನ್ನಮುತ್ತು, ಕೇಶವಮೂರ್ತಿ, ಗ್ರಾ.ಪಂ. ಸದಸ್ಯರಾದ ಪ್ರವೀಣ್, ಮಾದಶೆಟ್ಟಿ, ಕೋಟಂಬಳ್ಳಿ ಮಹದೇವ್, ಗುರುಸಿದ್ದಯ್ಯ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *