ಚಾಮರಾಜನಗರ: ಸನಾತನ ಹಿಂದು ಧರ್ಮ ರಕ್ಷಣೆ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ತಂದೆ-ತಾಯಿಂದಿರ ಕೈಯಲ್ಲಿದ್ದು, ಮಕ್ಕಳಿಗೆ ಹಿಂದು ಸಂಸ್ಕೃತಿ ಹಾಗೂ ಆಚಾರ ವಿಚಾರಗಗಳ ಬಗ್ಗೆ ಬಾಲ್ಯದಿಂದ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಅಖಿಲ ಭಾರತ ಭಜರಂಗ ದಳದ ಸಹ ಸಂಚಾಲಕ ಸೂರ್ಯನಾರಾಯಣಜೀ ತಿಳಿಸಿದರು.

ನಗರದ ಶಂಕರಪುರ ಬಡಾವಣೆಯಲ್ಲಿರುವ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗು ವಿಶ್ವ ಹಿಂದು ಪರಿಷತ್ ಸಂಸ್ಥಾಪನಾ ದಿನದ ಅಂಗವಾಗಿ ನಡದ ಶ್ರೀ ಕೃಷ್ಣಾ ವೇಷಭೂಷನ ಸ್ಪರ್ಧೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು. ಸನಾತನ ಹಿಂದು ಧರ್ಮದ ಬಗ್ಗೆ ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿದೆ. ಈ ಧರ್ಮದ ಬಗ್ಗೆ ಅವಹೇಳನ ಮಾಡುವವರು ಹೆಚ್ಚಾಗುತ್ತಿದ್ದಾರೆ. ಈ ಧರ್ಮ ಇರಲೇ ಇಲ್ಲ ಎಂಬ ವ್ಯಾಖ್ಯಾನವನ್ನು ಮಾಡುವ ಮೂಲಕ ಅಖಂಡ ಹಿಂದುಗಳಿಗೆ ಅಪಮಾನ ಮಾಡಲಾಗುತ್ತಿದೆ.
ಇದಕ್ಕೆ ತಕ್ಕ ಉತ್ತರವನ್ನು ನೀಡಬೇಕಾದರೆ ನಾವೆಲ್ಲರು ಹಿಂದೂವಾಗಿಯೇ ಬಾಳಬೇಕು. ಬದುಕಬೇಕು. ಹಿಂದು ಧರ್ಮದ ಆಚಾರ ವಿಚಾರಗಳನ್ನು ಮನೆ ಮನೆಗಳಲ್ಲಿ ಆಳವಡಿಸಿಕೊಂಡು ನಮ್ಮ ಮಕ್ಕಳಿಗೆ ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಆಗಬೇಕಾಗಿದೆ ಎಂದರು.
ಸನಾತನ ಹಿಂದು ಧರ್ಮವು ವಿವಿಧ ಜಾತಿ, ಧರ್ಮಗಳನ್ನು ಒಳಗೊಂಡದಂತೆ ವೈವಿದ್ಯತೆಯ ಏಕತೆಯನ್ನು ಸಾರುವ ಬಹಳ ಪವಿತ್ರವಾದ ಧರ್ಮವಾಗಿದೆ. ಇದರ ವಿರುದ್ದ ಮಾತನಾಡುತ್ತಿದ್ದಾರೆ ಎಂದರೆ ನಮ್ಮಲ್ಲಿಯೇ ಏನು ನ್ಯೂನತೆ ಇದೆ ಎಂಧರ್ಥ. ಇದನ್ನು ತಿದ್ದುಕೊಂಡು ಧರ್ಮ ಆಚರಣೆಯಲ್ಲಿ ಮುಂದಾಗಬೇಕು. ಇತರರ ಬಾಯಿಯನ್ನು ಮುಚ್ಚಿಸುವುದು ಕಷ್ಟ ಸಾಧ್ಯವೇನಲ್ಲ. ಹೀಗಾಗಿ ದ್ವಾಪರಯುಗ, ತೇತ್ರಾಯುಗದಲ್ಲಿಯೇ ಧರ್ಮ ಸ್ಥಾಪನೆಗೆ ಶ್ರೀರಾಮ, ಶ್ರೀ ಕೃಷ್ಣ ಜನ್ಮ ವೆತ್ತಿದ್ದಾರೆ. ಈಗ ತಾವೆಲ್ಲರು ಸಹ ಶ್ರೀಕೃಷ್ಣ ಮತ್ತು ಶ್ರೀರಾಮರಂತಾಗಬೇಕು. ಇದಕ್ಕೆ ಪೋಷಕರ ಸಹಕಾರ ಹೆಚ್ಚಿನಾಗಿದೆ ಎಂದು ಸೂರ್ಯನಾರಾಯಣ ತಿಳಿಸಿದರು.
ಪ್ರತಿ ಮನೆಗಳಲ್ಲಿ ಭಗವದ್ಗೀತೆಯನ್ನು ಇಟ್ಟು ಪೂಜೆ ಮಾಡುವ ಜೊತೆಗೆ ಮಕ್ಕಳಿಗೆ ಒಂದೊಂದು ಶ್ಲೋಕವನ್ನು ಹೇಳಿಕೊಟ್ಟು ಅದರ ಅರ್ಥವನ್ನು ತಿಳಿಸುವ ಮೂಲಕ ಅವರ ಮನವರ್ತನೆ ಮಾಡಬೇಕು. ನ್ಯಾಯಾಲಯದಲ್ಲಿ ಭಗವದ್ಗೀತೆಯನ್ನು ಇಟ್ಟು ಪ್ರಮಾಣ ಮಾಡುವ ಮೂಲಕ ಸಾಕ್ಷ್ಯಯನ್ನು ನುಡಿಸಲಾಗುತ್ತದೆ. ಇಂಥ ಪವಿತ್ರವಾದ ಸನಾತನ ಹಿಂದು ಧರ್ಮದ ಬಗ್ಗ ಪ್ರಶ್ನೆ ಮಾಡುವ ಮನೋಭಾವನೆ ಧರ್ಮ ಧರ್ಮಗಳ ನಡುವೆ ಕಂದಕ ನಿರ್ಮಾಣ ಮಾಡಿ ಹರಾಜುಕತೆಯನ್ನು ಸೃಷ್ಟಿ ಮಾಡುವ ಹುನ್ನಾರ ಹಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚುಡಾ ಮಾಜಿ ಅಧ್ಯಕ್ಷ ಹಾಗೂ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಸದಸ್ಯ ಎಸ್. ಬಾಲಸುಬ್ರಮಣ್ಯ ಮಾತನಾಡಿ, ಕೃಷ್ಣ ವೇಶ ಸ್ಪರ್ಧೆಯ ಮೂಲಕ ಮಕ್ಕಳಲ್ಲಿ ಶ್ರೀಕೃಷ್ಣನನ್ನು ಕಾಣುವ ಮತ್ತು ಶ್ರೀಕೃಷ್ಣನ ಪ್ರೇರಣೆಯನ್ನು ಪಡೆದು ಉನ್ನತ ಮಟ್ಟಕ್ಕೆ ಹೋಗಲಿ ಎಂಬ ಆರೈಕೆ ಪೋಷಕರಾಗಿರುತ್ತದೆ. ಶ್ರೀಕೃಷ್ಣ ಜನ್ಮಾಷ್ಠಾಮಿಯ ಪ್ರಯುಕ್ತ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ೮೦ಕ್ಕು ಹೆಚ್ಚು ಪುಟಾಣಿಗಳೂ ಭಾಗವಹಿಸಿರುವುದು ಸಂತಸ ತಂದಿದೆ. ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜೊತೆಗೆ ನಮ್ಮ ದೇಶದ ಪರಂಪರೆ ಹಾಗು ವೈಭವನ್ನು ಬಿಂಬಿಸುವ ಕೆಲಸವನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುದ್ದ ಕೃಷ್ಣ ವಿಭಾಗದಲ್ಲಿ ೩೨ ಮಕ್ಕಳು, ಬಾಲ ಕೃಷ್ಣ ವಿಭಾಗದಲ್ಲಿ ೧೬ ಮಕ್ಕಳು, ಯಶೋಧೆ ಕೃಷ್ಣ ವಿಭಾಗದಲ್ಲಿ ೧೦ ಮಂದಿ ಹಾಗೂ ಚೆಲುವ ಕೃಷ್ಣ ಸ್ಪರ್ಧೆಯಲ್ಲಿ ೨೨ ಮಕ್ಕಳು ಸೇರಿ ೮೦ಕ್ಕು ಹೆಚ್ಚು ಮಕ್ಕಳು ಹಾಗು ತಾಯಿಂದರು ಭಾಗವಹಿಸುವ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಇನ್ನರ್ ವೀಲ್ ಸಂಸ್ಥೆಯ ಲಕ್ಷ್ಮೀ ಶಿವಕುಮಾರ್, ಸವತಿಆ, ಯೋಗ ಬಂಧುಗಳಾದ ಸುಕಾನ್ಯ, ರೇಣುಕಾ ಅವರು ತೀರ್ಪುಗಾರರಾಗಿ ಆಗಮಿಸಿದ್ದರು. ಮುಖ್ಯ ಶಿಕ್ಷಕ ಸಿ.ಪಿ. ಶ್ರೀನಿವಾಸ್, ಸಹ ಶಿಕ್ಷಕರ ವೃಂದ ಹಾಗೂ ಪೋಷಕರು ಭಾಗವಹಿಸಿದ್ದರು. ಮೊದಲಾದವರು ಇದ್ದರು.