ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ

ಚಾಮರಾಜನಗರ : ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡುವಂತೆ  ಜಿಲ್ಲಾ ಪಡಿತರ ವಿತರಕರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ.
ವಸುಂದರ ಹೆಗ್ಗಡೆ  ಅವರಿಗೆ ಮನವಿ ಸಲ್ಲಿಸಲಾಯಿತು.
ಆಗಸ್ಟ್ 2026 ರ ಮಾಹೆಯ ಪಡಿತರ ವಿತರಣೆಯು ಕೇಂದ್ರ ಸರ್ಕಾರದ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡು ತಿಂಗಳ ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಪಡಿತರದಾರರ ಹೆಬ್ಬೆಟ್ಟನ್ನು ಎರಡು ಬಾರಿ ಪಡೆದು ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಇದು ಸರ್ಕಾರದ ಆದೇಶವಾಗಿರುತ್ತದೆ. ಆದ ಕಾರಣ ಕಳೆದ ಒಂದು ವಾರದಿಂದ ಸರ್ವ‌ರ್ ಸಮಸ್ಯೆ ಆಗಿರುತ್ತದೆ. ಪ್ರತಿ ಕಾರ್ಡಿಗೂ 15 ರಿಂದ 20 ನಿಮಿಷಗಳು ಬೇಕಾಗಿರುತ್ತದೆ. ಈ ತಿಂಗಳು ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಶೇ. 70 ರಷ್ಟು ವಿತರಣೆಯಾಗಿರುವುದಿಲ್ಲ. ಇನ್ನೂ ಉಳಿದಿರುವುದು ಕೇವಲ 5 ದಿನಗಳು ಮಾತ್ರ ಇನ್ನೂ ಸರ್ವರ್ ಕೊಡದೇ ಇದ್ದರೆ ಪಡಿತರ ವಿತರಣೆ ಮಾಡುವುದು ಯಾವಾಗ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರು ಕೂಲಿ ಕೆಲಸಕ್ಕೆ ಹೋಗದೆ ನ್ಯಾಯಬೆಲೆ ಅಂಗಡಿ ಮುಂದೆ ನಿಂತರೆ ಇದಕ್ಕೆ ಯಾರು ಜವಾಬ್ದಾರರರು. ಪಡಿತರದಾರರು ಮನಬಂದಂತೆ ಸರ್ವರ್
ಯಾವಾಗ ಬರುತ್ತೆ ನಮಗೆ ಪಡಿತರ ಯಾವಾಗ ಕೊಡುತ್ತೀರ ಕೊಡದೆ ಇದ್ದರೆ ನಾವು ಏನು ಊಟ ಮಾಡುವುದು ಎಂದು ಮನಬಂದಂತೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಹಾಗೂ ಅಧಿಕಾರಿಗಳನ್ನು ಕೇಳುತ್ತಿದ್ದಾರೆ ದಯಮಾಡಿ ಈ ಸಮಸ್ಯೆಯನ್ನು ಪರಿಹರಿಸಿ ಗ್ರಾಹಕರಿಗೆ ಪಡಿತರ ವಿತರಣೆ ಅವಕಾಶ ಮಾಡಿಕೊಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ.
ವಸುಂದರ ಹೆಗ್ಗಡೆ  ಅವರಿಗೆ ಸಲ್ಲಿಸಿರುವ ಮನವಿಯಲ್ಲಿ
ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ, ಜಿಲ್ಲಾಧ್ಯಕ್ಷ ಗಿರೀಶ್ ಉಡಿಗಾಲ ಒತ್ತಾಯಿಸಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾ ಖಜಾಂಚಿ ಚೆಂಗುಮಣಿ,  ಆರ್.ಎಂ.ಸಿದ್ದರಾಜು, ಕಿಟ್ಟಿ,  ಹೆಗ್ಗೋಠಾರ ‌ಮಹದೇವಸ್ವಾಮಿ, ವಿನೋದ್ ಹೊನ್ನಳ್ಳಿ, ನಂದೀಶ್ ಹೊಸಹಳ್ಳಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *