- ಜಿಲ್ಲಾ ಉಪ್ಪಾರ ಸಂಘದಿಂದ ಪ್ರತಿಭಾ ಪುರಸ್ಕಾರ ಸಮಾರಂಭ

ಚಾಮರಾಜನಗರ: ಉಪ್ಪಾರ ಸಮುದಾಯದ ಮಕ್ಕಳು ಐಎಎಸ್, ಕೆಎಎಸ್ ವ್ಯಾಸಂಗಕ್ಕೆ ಒತ್ತು ನೀಡಬೇಕು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಉಪ್ಪಾರ ಸಂಘ, ಜಿಲ್ಲಾ ವ್ಯಾಪ್ತಿಯ ಎಲ್ಲಾ ಗಡಿಮನೆ, ಕಟ್ಟೆಮನೆ ಹಾಗೂ ಎಲ್ಲಾ ಗ್ರಾಮಗಳ ಯಜಮಾನರುಗಳು, ಕುಲಸ್ಥರು, ತಾಲೂಕು ಉಪ್ಪಾರ ಸಂಘಗಳು, ಜಿಲ್ಲೆಯ ಉಪ್ಪಾರ ನೌಕರರ ಸಂಘಗಳು, ಎಲ್ಲಾ ಉಪ್ಪಾರ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2024-2025 ಮತ್ತು 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಉಪ್ಪಾರ ಸಮುದಾಯವು ಶಿಕ್ಷಣ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಮುನ್ನಡೆಯಲು ಐಎಎಸ್ ಮತ್ತು ಕೆಎಎಸ್ ನಂತಹ ಉನ್ನತ ನಾಗರಿಕ ಸೇವಾ ಪರೀಕ್ಷೆಗಳ ವ್ಯಾಸಂಗಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮುದಾಯದ ಯುವಜನರು ಉನ್ನತ ಹುದ್ದೆಗಳನ್ನು ಅಲಂಕರಿಸುವುದರಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಮತ್ತು ಸಮುದಾಯದ ಅಭಿವೃದ್ಧಿಗೆ ಶ್ರಮಿಸಲು ದೊಡ್ಡ ಮಟ್ಟದ ಅವಕಾಶ ಸಿಗುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಉಪ್ಪಾರ ಜನಾಂಗ ಶಿಕ್ಷಣದಲ್ಲಿ ಮುಂದಿದ್ದು ಆರಣ್ಯ ಇಲಾಖೆ, ಪೊಲೀಸ್
ಇಲಾಖೆಯಲ್ಲಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಬಾರಿ ಚಾ.ನಗರದಲ್ಲಿ ರಾಜ್ಯ ಮಟ್ಟದ ಉಪ್ಪಾರ ಸಮಾವೇಶವನ್ನು ಆಯೋಜಿಸಲಾಗುವುದು ಎಂದರು. ಉಪ್ಪಾರ ಜನಾಂಗದವರು ಸಂಘಟಿತರಾಗಬೇಕು. ಮಕ್ಕಳು ಚೆನ್ನಾಗಿ ಓದಿ ಜನಾಂಗಕ್ಕೆ ಕೀರ್ತಿ ತರಬೇಕು. ಐಎಎಸ್ ಅಧಿಕಾರಿಗಳಾಗುವ ನಿಟ್ಟಿನಲ್ಲಿ ಶ್ರಮಿಸಬೇಕು. ಸ್ವಸಹಾಯ ಸಂಘಗಳು ಬಂದ ನಂತರ ಜನಾಂಗದವರಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಭಾವನೆ ಬಂದಿದೆ ಎಂದು ತಿಳಿಸಿದರು.
ಪ್ರಸ್ತುತ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದೆ ಇದ್ದಾರೆ. ಪಶು ಸಂಗೋಪನೆ ಇಲಾಖೆಯಲ್ಲಿ 700 ಡಿ ಗ್ರೂಪ್ ನೌಕರರ ಹುದ್ದೆ ಖಾಲಿ ಇದ್ದು ಮುಂದಿನ ದಿನಗಳಲ್ಲಿ ಆ ಹುದ್ದೆಗಳನ್ನು ತುಂಬಲು ಕ್ರಮವಹಿಸಲಾಗಿದ್ದು ಎಲ್ಲ ಜನಾಂಗದವರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಯುಗದಲ್ಲಿ ಓದಿದ ಎಲ್ಲರಿಗೂ ಸರ್ಕಾರ ಹುದ್ದೆ ಸಿಗುವುದಿಲ್ಲ. ಆದ್ದರಿಂದ ಶಿಕ್ಷಣ ಮುಗಿಸಿದ ಬಳಿಕ ಬೇರೆ ಉದ್ಯೋಗಗಳನ್ನು ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು. ವೆಂಕೋಬ, ಬಿಜೆಪಿ ರಾಷ್ಟ್ರೀಯ ಓಬಿಸಿ ಕಾರ್ಯಕಾರಣಿ ಸಮಿತಿ ಸದಸ್ಯ ನೂರೊಂದುಶೆಟ್ಟಿ, ಜಿ.ಪಂ.ಮಾಜಿ ಉಪಾಧ್ಯಕ್ಷ ಯೋಗೇಶ್, ಸದಸ್ಯ ಮಧುವನಹಳ್ಳಿಶಿವಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ಕಾವೇರಿ ಶಿವಕುಮಾರ್, ಸಮಾಜದ ಮುಖಂಡರಾದ ಕೃಷ್ಣಸ್ವಾಮಿ, ಮಂಗಲದ ಗಡಿ ಯಜಮಾನ ಕೃಷ್ಣಶೆಟ್ಟಿ, ಚಾಮರಾಜನಗರ ಗಡಿ ಯಜಮಾನ ಚಿಕ್ಕತಾಂಡಶೆಟ್ಟಿ, ಹರದನಹಳ್ಳಿ ಗಡಿ ಯಜಮಾನ ಜಯಸ್ವಾಮಿ, ಬಿಇಓ ಹನುಮಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್, ಯಳಂದೂರು ಟಿಎಪಿಸಿಎಂಎಸ್ ಉಪಾಧ್ಯಕ್ಷ ಕುಸುಮರಾಜ್, ಚಾಮರಾಜನಗರ ಪದವಿಪೂರ್ವ ಕಾಲೇಜಿನ ಮಾಜಿ ಪ್ರಾಂಶುಪಾಲ ಸೋಮಣ್ಣ, ಚಾಮರಾಜನಗರ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ, ಗುಂಡ್ಲುಪೇಟೆಯ ಸಮಾಜದ ಮುಖಂಡ ಜೆ.ಬಿ.ಶಿವಕುಮಾರ್, ಚೆಸ್ಕಾಂ ಲೆಕ್ಕಾಧಿಕಾರಿ ಮಹೇಶ್, ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಸದಸ್ಯ ಮರಿಸ್ವಾಮಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಕಿನಕಹಳ್ಳಿ ಸಿದ್ದರಾಜು, ಯುವ ಮುಖಂಡ ಸೋಮಣ್ಣ ಉಪ್ಪಾರ್, ಯುವ ಮುಖಂಡ ಚೇತನ್ ಬಡಗಲಮೋಳೆ, ನಗರಸಭೆ ಮಾಜಿ ಸದಸ್ಯ ಬಸವಣ್ಣ, ತಾ.ಪಂ. ಮಾಜಿ ಸದಸ್ಯ ಎಚ್.ಎಂ.ಮಹದೇವಶೆಟ್ಟಿ, ಯಳಂದೂರು ತಾಲೂಕು ನೌಕರರ ಸಂಘದ ಅಧ್ಯಕ್ಷ ರೇಚಣ್ಣ, ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಬ್ಯಾಡಮೂಡ್ಲು ನಾಗರಾಜು, ಪಿಎಲ್ಡಿ ಬ್ಯಾಂಕ್ ಮಾಜಿ ಸದಸ್ಯ ಕೋಡಿಮೋಳೆ ಗೋವಿಂದಶೆಟ್ಟಿ, ಮಹದೇವಶೆಟ್ಟಿ, ಬನ್ನಿತಾಳಪುರದ ಮಹದೇವಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಪುಟ್ಟಸ್ವಾಮಿ, ಕೆಡಿಪಿ ಸದಸ್ಯ ನಿವಾಸ,ನಗರಾಭಿವೃದ್ಧಿ ಸದಸ್ಯ ದ್ವಾರಕಿ, ನಾಗಶೆಟ್ಟಿ, ಗಣೇಶ್, ಕೊಳ್ಳೇಗಾಲ ನೌಕರರ ಸಂಘದ ಮಹದೇವಸ್ವಾಮಿ, ವೆಂಕಟಾಚಲ, ಸೋಮಣ್ಣ, ಶಿವಕುಮಾರ್, ಮಾದೇಶ್, ಯಡಮೋಳೆ ಪಿ.ಗೋವಿಂದರಾಜು, ಜಿಲ್ಲಾ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ಬಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು, ಮಾಜಿ ನಗರಸಭಾ ಸದಸ್ಯ ಮಹೇಶ್, ಮಹದೇವಸ್ವಾಮಿ, ನಲ್ಲಿ ಶಿವಕುಮಾರ್, ಇತರರು ಹಾಜರಿದ್ದರು.
