
ಚಾಮರಾಜನಗರ: ಯುವಕರನ್ನು ಸಾಲಕ್ಕೆ ಸಿಲುಕಿ ಅವರ ಪ್ರಾಣಕ್ಕೆ ಕುತ್ತು ತರುವ ಆನ್ಲೈನ್ ಗೇಮ್ ನ್ನು ಸರ್ಕಾರ ರದ್ದುಗೊಳಿಸಬೇಕು ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ಎಚ್ಚರಿಸಿದ್ದಾರೆ.
ಈಗಾಗಲೇ ಯುವಜನಾಂಗ ಅನ್ಲೈನ್ ಗೇಮ್ ಆಡಿ ಸಾಲಗಾರರಾಗಿದ್ದಾರೆ. ಆನ್ ಲೈನ್ ಗೇಮ್ನಿಂ ದ ಸಾಲ ಪಡೆದು ಮರುಪಾವತಿ ಮಾಡಲಾಗಿದೆ ತುಂಬಾ ಕಷ್ಟ ದಲ್ಲಿ ಸಿಲುಕಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಯುವಜನರ ಹಿತದೃಷ್ಟಿಯಿಂದ ಅನ್ಲೈನ್ ಗೇಮ್ ರದ್ದುಗೊಳಿಸಬೇಕು ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹಾಲಿನನಾಗರಾಜು ಸರ್ಕಾರ, ಜಿಲ್ಲಾಡಳಿತವನ್ನು ಎಚ್ಚರಿಸಿದರು.