- ,ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ
ಚಾಮರಾಜನಗರ : ಹೊಲಿಗೆ ತರಬೇತಿಯಿಂದ ಮಹಿಳೆಯರು ಸ್ವಂತ ಉದ್ಯೋಗವನ್ನು ಸೃಷ್ಠಿಸಲು ಅತ್ತುತ್ತಮ ಅವಕಾಶವಾಗಿದ್ದು, ಇದು ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯವನ್ನು ತಂದುಕೊಡುವ ಕೌಶಲ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಹೇಳಿದರು.
ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ವತಿಯಿಂದ ಪರಿಶಿಷ್ಟ ಜಾತಿಯ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಅತ್ಯಂತ ಕಡಿಮೆ ಬಂಡವಾಳ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆ ತರಬೇತಿ ಸಹಕಾರಿಯಾಗಿದೆ. ಯಾರ ಮೇಲೂ ಅವಲಂಬಿತರಾಗದೆ ತಮ್ಮದೆ ಆದ ಟ್ರೈಲರಿಂಗ್ ಶಾಪ್, ಉಡುಪು ತಯಾರಿಕಾ ಘಟಕವನ್ನು ಆರಂಭಿಸಬಹುದು. ತಮ್ಮ ಮನೆಯ ಬಟ್ಟೆಗಳನ್ನು ತಾವೇ ಸ್ವತಹ ಹೊಲಿದುಕೊಳ್ಳುವ ಮೂಲಕ ಕುಟುಂಬದ ಹೊರೆ ತಗ್ಗಿಸಬಹುದು. ಸ್ವಯಂ ಉದ್ಯೋಗ ಸ್ಥಾಪನೆಗಾಗಿ ಸರ್ಕಾರವು ಬ್ಯಾಂಕ್ ಮೂಲಕ ಸಬ್ಸಿಡಿ ಸಾಲ ಸೌಲಭ್ಯ ದೊರೆಯುತ್ತದೆ ಇಂತಹ ಅವಕಾಶ ಸದುಪಯೋಗಪಡಿಸಿಕೊಂಡು ಸಬಲರಾಗಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ನ್ಯಾಯ ವೇದಿಕೆಯು ದಲಿತ ಸಮುದಾಯ ಅಭಿವೃದ್ಧಿಗಾಗಿ ತರಬೇತಿಗಳನ್ನು ನೀಡುತಿದೆ ಇಂತಹ ಅವಕಾಶಗಳನ್ನು ಸಮುದಾಯದ ನಿರುದ್ಯೋಗ ಯುವಕ, ಯುವತಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಸುನೀಲ್, ಮಹಿಳಾ ಒಕ್ಕೂಟ ಎಂ.ಬಿ.ಕೆ ಹೊನ್ನಮ್ಮ, ತರಬೇತಿ ಶಿಕ್ಷಕಿ ಮಲೆಯೂರು ಮೀನಾಕ್ಷಿ ಇತರರು ಹಾಜರಿದ್ದರು.