ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಎರಡನೇ ಬಾರಿಗೆ ಸಚಿವ ಸ್ಥಾನ ಒಲಿದ ಹಿನ್ನೆಲೆಯಲ್ಲಿ ಕೋಡಿ ಮೋಳೆ ಗ್ರಾಮದ ಭಗತ್ ಸಿಂಗ್ ಯುವಸೇನೆ ವತಿಯಿಂದ ಅವರ ನಿವಾಸವಾದ ಉಪ್ಪಿನ ಮೋಳೆ ಗ್ರಾಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಕೋಡಿಮೋಳೆ ಪ್ರಕಾಶ್, ಮಾಜಿ ಗ್ರಾ,ಪಂ ಸದಸ್ಯರಾಜು, ಭಗತ್ಸಿಂಗ್ ಯುವಸೇನೆ ಅಧ್ಯಕ್ಷ ಕೋಡಿಮೋಳೆ ಕಾಂತರಾಜು, ಮಹೇಶ್, ಮನು ಇದ್ದರು.
