- ಚಾಮರಾಜನಗರ ತಾಲೂಕು ಪರವಾನಗಿ ಹೊಂದಿದ ಜಿಲ್ಲಾ ಪತ್ರ ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ಸಭೆ
ಚಾಮರಾಜನಗರ; ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಚಾ.ನಗರ ಉಪ ನೋಂದಣಿ ಇಲಾಖೆಯಲ್ಲಿ ಪತ್ರ ರಹಿತ ನೋಂದಾಣಿ ವ್ಯವಸ್ಥೆ ಜಾರಿಯಾಗುತ್ತಿದ್ದು, ಈ ವ್ಯವಸ್ಥೆಯಲ್ಲಿ ಪತ್ರ ಬರಹಗಾರರ ವಿದ್ಯುನ್ಮಾನ ಸಹಿಯನ್ನು ಕಡ್ಡಾಯಗೊಳಿಸಬೇಕೆಂದು ರಾಜ್ಯ ಪತ್ರ ಬರಹಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಪ್ರಕಾಶ ರಾಜೇ ಅರಸು ಒತ್ತಾಯಿಸಿದರು.
ನಗರದ ಉಪನೋಂದಣಿ ಮತ್ತು ವಿವಾಹ ನೋಂದಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ತಾಲೂಕು ಪತ್ರ ಬರಹಗಾರ ಸಂಘ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯ ಸರ್ಕಾರ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಗುರುವಾರ ದಿಂದಲೇ ಪತ್ರ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿ ಮಾಡುತ್ತಿರುವುದನ್ನು ರಾಜ್ಯ ಪತ್ರ ಬರಹಗಾರ ಸಂಘದ ಸ್ವಾಗತ ಮಾಡುತ್ತಿದೆ. ಅದೇ ರೀತಿ ನೋಂದಣಿ ಸಂದರ್ಭದಲ್ಲಿ, ಆಸ್ತಿ ಕೊಡುವವರು, ಪಡೆದುಕೊಳ್ಳುವವರ ವಿದ್ಯುನ್ಮಾನ ಸಹಿ ಹಾಗೂ ಪತ್ರ ರಹಿತ ನೋಂದಣಿ ಇರುತ್ತದೆ. ಇದರೊಟ್ಟಿಗೆ ಪತ್ರ ಬರಹಗಾರರಿಗೆ ವಿದ್ಯುನ್ಮಾನ ಸಹಿ ಕೊಡುವ ಮೂಲಕ ಅವರ ಬದುಕಿನ ವೃತ್ತಿಯಲ್ಲಿ ಉಳಿಸಿಕೊಡಬೇಕೆಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಹಾಗೂ ಕಂದಾಯ ಇಲಾಖೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮವಾಗಿ ಈ ವ್ಯವಸ್ಥೆಯನ್ನು ಜಾರಿ ಮಾಡುತ್ತಿದೆ. ಇದರಲ್ಲಿ ಸಾರ್ವಜನಿಕರಿಗೆ ಅನೇಕ ಅನುಕೂಲ ಇದ್ದು,ಇದನ್ನು ಸಹ ಸರಿಪಡಿಸಲು ಸರ್ಕಾರ ಮುಂದಾಗಬೇಕು. ಡಿಜಿಟಲ್ ವ್ಯವಸ್ಥೆಯಲ್ಲಿ ಪತ್ರವೇ ಇಲ್ಲದೇ ನೋಂದಣಿ ಮಾಡಿಸುವುದು ಕಷ್ಟಸಾಧ್ಯವಾಗುತ್ತದೆ. ನಮ್ಮ ರಾಜಮಹಾರಾಜರ ಕಾಲದಿಂದಲೂ ಪತ್ರ ವ್ಯವಸ್ಥೆ ಜಾರಿಯಲ್ಲಿದೆ. ಯಾವುದೇ ಆಸ್ತಿಯನ್ನು ನೋಂದಣಿ ಮಾಡಿಡಲು ಪತ್ರ ಬಹುಮುಖ್ಯವಾಗಿತ್ತು. ಆದರೆ, ಈ ವ್ಯವಸ್ಥೆಯಡಿಯಲ್ಲಿ ಡಿಜಿಟಲ್ ಪತ್ರಗಳು ಮಾತ್ರ ಜಾಲ್ತಿಯಲ್ಲಿರುತ್ತವೆ. ಇದರಿಂದ ಪತ್ರ ಬರಹಗಾರರು ಮತ್ತು ಸಾರ್ವಜನಿಕರಿಗೆ ಅನೇಕ ನೂನ್ಯತೆಗಳು ಕಂಡು ಬರುತ್ತವೆ. ನೋಂದಣಿ ಮಾಡುವಾಗ ಪತ್ರ ಬಹರಗಾರರು ಪ್ರಮುಖ ಪಾತ್ರವನ್ನು ವಿಶ್ವಾಸವಾಗಿ ವಹಿಸುತ್ತಿದ್ದರು. ಪತ್ರ ರಹಿತ ವ್ಯವಸ್ಥೆಯಲ್ಲಿ ನಮ್ಮ ಪಾತ್ರ ವೇನು ಎಂಬುವುದು ಇನ್ನು ಸಹ ತಿಳಿಯುತ್ತಿಲ್ಲ. ಹೀಗಾಗಿ ನಮ್ಮನ್ನು ಸಹ ಈ ವ್ಯವಸ್ಥೆಯಲ್ಲಿ ಸೇರ್ಪಡೆ ಮಾಡಿಕೊಂಡು ಸೇವಾ ಭದ್ರತೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ಚಾಮರಾಜನಗರ ತಾಲೂಕು ಪರವಾನಗಿ ಹೊಂದಿದ ಜಿಲ್ಲಾ ಪತ್ರ ಬರಹಗಾರರ ಕ್ಷೇಮಾಭಿವೃದ್ಧಿ
ಸಂಘದ ಅಧ್ಯಕ್ಷ ಜಿ.ನಂದೀಶ್ವರಸ್ವಾಮಿ, ಕಾರ್ಯದರ್ಶಿ ಮಹಾದೇವಸ್ವಾಮಿ, ಖಜಾಂಚಿ ಹೊಮ್ಮ ರಾಮನಾಯಕ, ಸಂಘಟನಾ ಕಾರ್ಯದರ್ಶಿಗಳಾದ ಶಂಕರರಾಮಸಮುದ್ರ, ರವಿ, ಸೈಯದ್ ಮುಸಾವೀರ್, ಬಿ.ಚಂದ್ರು ಮಸಗಾಪುರ ಸ್ವಾಮಿ, ಕಾನೂನು ಸಲಹೆಗಾರ ಮಹದೇವಯ್ಯ, ನಿರ್ದೇಶಕರಾದ ಕಾಂತರಾಜು, ಎ.ಎಂ.ಮಹೇಶ್, ಲಿಂಗರಾಜು ನಾಯಕ, ಸಿದ್ದರಾಜು ಶೆಟ್ಟಿ , ಮಲ್ಲಶೆಟ್ಟಿ, ಪುಟ್ಟಲಿಂಗಪ್ಪ, ನಾಗೇಂದ್ರ ಇತರರು ಭಾಗವಹಿಸಿದ್ದರು.