ಚಾಮರಾಜನಗರ: ತಾಲೂಕಿನ ಮಾಲೆಗೆರೆಯಲ್ಲಿ ಮಣ್ಣು ತೆಗೆಯಲು ರೈತರಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ, ಜಿಲ್ಲಾಧ್ಯಕ್ಷ ಆಲೂರುಮಲ್ಲು ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ತಾಲೂಕಿನ ಮಾಲೆಗೆರೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ಮಣ್ಣು ತೆಗೆಯಲು ಸಣ್ಣ ನೀರಾವರಿ ಇಲಾಖೆ ಅನುಮತಿ ನೀಡುತ್ತಿಲ್ಲ. ಸರ್ಕಾರವೇ ಕೆರೆಯಲ್ಲಿ
ಹೂಳು ತೆಗೆಯುವಂತೆ ಹೇಳುತ್ತದೆ. ರೈತರು ತಮ್ಮ ಟ್ರಾಕ್ಟರ್ ಮೂಲಕ ಮಣ್ಣು ತೆಗೆಯಲು ಅವಕಾಶ ನೀಡುತ್ತಿಲ್ಲ. ಕೆರೆಮಣ್ಣನ್ನು ಜಮೀನುಗಳಿಗೆ ಹಾಕುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ. ಹೆಚ್ಚಿನ ಇಳುವರಿ ಬರುತ್ತದೆ. ಆಗಾಗಿ ರೈತರು ಟ್ರಾಕ್ಟರ್ಗಳ ಮೂಲಕ ಕೆರೆಮಣ್ಣು ತುಂಬಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿ ಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ರೈತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಶಂಕರ್, ಕಾಳನಹುಂಡಿ ಮಲ್ಲಿಕ್, ಬೊಕ್ಕೇಪುರ ಮಲ್ಲು, ಕೆಂಪರಾಜು, ಕುಮಾರ್, ಮನೋಜ್, ಮಹೇಂದ್ರ, ಮನು. ಮಲ್ಲೇಶ್ ಇತರರು ಹಾಜರಿದ್ದರು.
