ಚಾಮರಾಜನಗರ: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ನಗರದ ಭುವನೇಶ್ವರಿ ವೃತ್ತದಲ್ಲಿ ನಗರಸಭಾ ಮಾಜಿ ಅಧ್ಯಕ್ಷರಾದ ಆರ್.ಎಂ.ರಾಜಪ್ಪ, ಸುರೇಶ್ ನಾಯಕ ಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು..
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ,ಮಾಜಿ ರಾಮಸಮುದ್ರ ಬಸವರಾಜು, ಎಂ.ಶಿವಮೂರ್ತಿ, ಎಲ್.ಪ್ರಸನ್ನ, ಮುಖಂಡರಾದ ಹೆಚ್.ಹೆಚ್.ನಾಗರಾಜು, ರಮೇಶ್ ಕುಮಾರ್ ನಾಯಕ ಪಾಂಚಾಗಿ, ಶೇಖರಪ್ಪ, ಪುಟ್ಟಸ್ವಾಮಿ, ನವೀನ್,ಶಿವಕುಮಾರ್, ರಾಮಸಮುದ್ರ ನಾಗರಾಜು, ಅಕ್ಷಯ್ ಕುಮಾರ್, ಚೆನ್ನಪ್ಪ ಇತರರು ಹಾಜರಿದ್ದರು.