ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾಗವಾಲ ಸಿ.ನರೇಂದ್ರ ಅವರನ್ನು ವಕೀಲರಾದ ಆರ್.ಅರುಣ್ ಕುಮಾರ್ ಸನ್ಮಾನಿಸಿದರು.
ಬೆಂಗಳೂರಿನಲ್ಲಿ ಅವರ ಕಚೇರಿಯಲ್ಲಿ ಸಿ.ನರೇಂದ್ರ ಅವರನ್ನು ಭೇಟಿ ಮಾಡಿ ಶಾಲುಹೊದಿಸಿ, ಹಾರಹಾಕಿ, ಫಲತಾಂಬೂಲ ನೀಡಿ ಸನ್ಮಾನಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ದೊಡ್ಡರಾಯಪೇಟೆ ಗ್ರಾ.ಪಂ.ಮಾಜಿ ಸದಸ್ಯ ಸಿದ್ದರಾಜು, ಯ.ಅಶೋಕ್, ಮುಖಂಡರಾದ ಶಿವಶಂಕರ್, ರಾಜಣ್ಣ, ಕುಮಾರ್, ಸಿದ್ದಯ್ಯನಪುರ ಮೂರ್ತಿ ಇತರರು ಹಾಜರಿದ್ದರು.
