ಚಾಮರಾಜನಗರ: ವಕೀಲರಾದ ಅರುಣ್ ಕುಮಾರ್ ಅವರ ಪುತ್ರಿ ಹರ್ಷಿತ ಎ.ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರೋಟರಿ ಡಯಾಲಿಸಸ್ ಗೆ 10 ಸಾವಿರ ರೂ.ದೇಣಿ ನೀಡಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಅವರ ಮೂಲಕ ಅರುಣ್ ಕುಮಾರ್ ಅವರು ರೋಟರಿ ಡಯಾಲಿಸಸ್ ಗೆ ದೇಣಿಗೆ ನೀಡಿದರು.
ರೋಟರಿ ಅಧ್ಯಕ್ಷರಿಗೆ ಸನ್ಮಾನ; ಇದೇ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಅವರನ್ನು ಅರುಣ್ ಕುಮಾರ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರೋಟರಿ ಮಾಜಿ ಅಧ್ಯಕ್ಷ ಕಾಗಲವಾಡಿ ಚಂದ್ರು, ನೇಮಿರಾಜ್, ವಕೀಲ ವಿಜಯ್ ರಾವಲ್, ಆಟೋ ರಾಜು ಹಾಜರಿದ್ದರು.
